ರಾಯಚೂರು: ಹೊಸ ಅಪಾಯಕಾರಿ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಲಿಂಗಸ್ಗೂರು ತಾಲೂಕಿನ ಎಸ್.ಎಫ್.ಐ ಸಮಿತಿಯಿಂದ ಕರಡು ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪೂರು ಮಾತನಾಡಿ, ಶಿಕ್ಷಣದ ‘ಭಾರತೀಕರಣದ’ ಹೆಸರಲ್ಲಿ ಕೋಮುವಾದೀಕರಣ & ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ತಿಪ್ಪಣ್ಣ ಎಚ್. ನಿಲೋಗಲ್ , ಶಿವಲಿಂಗ, ಮುಖಂಡರಾದ ಅಮರೇಗೌಡ, ಬಾಲಸ್ವಾಮಿ, ಮಹಮ್ಮದ್ ಅಲಿ, ಬಸವರಾಜ್, ಅಮರಯ್ಯ, ಮಹಾಂತೇಶ್ ಗೆಜ್ಜಲಗಟ್ಟಾ, ಪವನ್ ಸಿಂಗ್, ರಾಜು, ವೆಂಕಣ್ಣ, ಶಿವಲಿಂಗ, ರಮೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.