ಭಾರತದ ವಿವೇಕದ ಪ್ರತೀಕ ಸ್ವಾಮಿ ವಿವೇಕಾನಂದ: ಡಾ. ಶಿವರಂಜನ ಸತ್ಯಂಪೇಟೆ

0
18

ಕಲಬುರಗಿ: ವಿವೇಕಾನಂದರ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಅವರ ಬದುಕು ಹಾಗೂ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿದ್ಯಾಸಾಗರ ಶಾಬಾದಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ, ನವಜೀವನ ರಕ್ತನಿಧಿ ಕೇಂದ್ರ ಜಂಟಿಯಾಗಿ ನಗರದ ಸರ್ವಜ್ಷ ಪಿಯು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರಿಯ ಯುವ ಸಪ್ತಾಹ 2023 ಅಂಗವಾಗಿ ನಡದ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವುಗಳು ಕೇವಲ ಪರಿವಾರಕ್ಕಾಗಿ ಬದುಕು ಸಾಗಿಸದೆ ಸಮಾಜಕ್ಕಾಗಿ ಬದುಕುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

Contact Your\'s Advertisement; 9902492681

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಸನ್ಯಾಸ ಪದಕ್ಕಿ ಸಾರ್ವಕಾಲಿಕ ಬೆಳಕು ನೀಡಿದ ಸ್ವಾಮಿ ವಿವೇಕಾನಂದರು, ಹಿಂದೂ ಧರ್ಮನಿಷ್ಠ ನೇತಾರರಲ್ಲದೆ ಹಿಂದೂಧರ್ಮದ ಒಳ ವಿಮರ್ಶಕರು, ಸರ್ವಧರ್ಮ ಮಾನ್ಯವಾದ ಮಾನವೀಯ ಮರು ವ್ಯಾಖ್ಯಾನಕಾರರು ಆಗಿದ್ದರು ಎಂದು ತಿಳಿಸಿದರು.

ಧರ್ಮವು ದೇವಸ್ಥಾನ ಕಟ್ಟುವುದರಲ್ಲಿ ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿ ಇಲ್ಲ. ಅದು ಗ್ರಂಥದಲ್ಲಿಯೂ ಇಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ ಎಂದು ಹೇಳಿದ ವಿವೇಕಾನಂದರು ಭಾರತದ ವಿವೇಕದ ಪ್ರತೀಕವಾಗಿದ್ದರು ಎಂದು ಹೇಳಿದರು.

ಭಾರತದ ವಿವೇಕ ಪರಂಪರೆಯ ಬುಧ್ಧ, ಬಸವಣ್ಣ, ಗಾಂಧಿ, ಭಗತ್‍ಸಿಂಗ್, ಬೋಸ್, ಅಂಬೇಡ್ಕರ್, ಸೂಫಿಸಂತ ಮುಂತಾದವರಲ್ಲಿ ಇವರು ಕೂಡ ಒಬ್ಬರು ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿದ್ದ ಬಿಜೆಪಿ ಮುಖಂಡ ಧರ್ಮಣ್ಣ ಇಟಗಾ, ಜೆಡಿಎಸ್ ಮುಖಂಡ ಬಸವರಾಜ ಬಿರಬಿಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಸದಸ್ಯ ಸುರೇಸ ಬಡಿಗೇರ ಮಾತನಾಡಿದರು. ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಭೂಮಿ ಮತ್ತು ಮಧು ಪ್ರಾರ್ಥನೆಗೀತೆ ಹಾಡಿದರು. ಮಂಜುನಾಥ ನಾಲವಾರಕರ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ, ಪ್ರಹ್ಲಾದ ಹಡಗಿಲಕರ್, ರಾಕೇಶ ಪಾಟೀಲ, ಅರವಿಂದ ನಾಟೀಕಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here