ಕಲಬುರಗಿ: ತಾಲೂಕಿನ ಹರಸೂರ ಗ್ರಾಮದ ಚೌಡಯ್ಯನವರ ದೇವಾಲಯದಲ್ಲಿ ದಿ. ೨೯ ರಂದು ಭಾನುವಾರ ಇಂದು ಮಧ್ಯಾಹ್ನ ೧೨ ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ೯೦೩ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಸಮಾಜದ ಪ್ರಮುಖರಾದ ಸಾಯಬಣ್ಣ ಜಮಾದಾರ್, ಮಹೇಶ ಕಲ್ಲೂರ್, ಸಂತೋಷ ಡೆಂಗಿ ತಿಳಿಸಿದ್ದಾರೆ.
ಕಲ್ಮಠ ಪೂಜ್ಯ ಕರಿಸಿದ್ದೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸುವರು. ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಜ್ಯೋತಿ ಬೆಳಗಿಸುವವರು. ಸ್ಥಳೀಯ ಗ್ರಾಪಂ ಅಧ್ಯಕ್ಷೆ ಪಲ್ಲವಿ ಮಹಾಂತೇಶ ಪಾಳಾ ಅಧ್ಯಕ್ಷತೆವಹಿಸುವರು. ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್, ಎಪಿಎಂಸಿ ಮಾಜಿ ಸದಸ್ಯ ಮೆಹರಾಜ ಪಟೇಲ್, ಬಿಜೆಪಿ ಮುಖಂಡ ಕೆ.ಸಿ. ಪಾಟೀಲ್, ಕೋಲಿ ಸಮಾಜದ ªಅಧ್ಯಕ್ಷ ಸಿದ್ದಣ್ಣ ಡೆಂಗಿ, ಸೊಂತ ಸರ್ಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯಗುರು ಸಿದ್ದಣ್ಣ ಮುಕರಂಬಿ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಬಸಪ್ಪ ಉಜ್ಜಾ, ಗ್ರಾಪಂ ಸದಸ್ಯರಾದ ರಾಜಶೇಖರ ಉಪ್ಪಿನ, ಪಿಡಿಓಗಳಾದ ಸುಧಾ ದಂಡೆ, ಅನುಪಮಾ, ಕಮಲಾಪುರ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಅಂಬಾರಾಯ ಜವಳಗಾ, ಗ್ರಾಪಂ ಉಪಾಧ್ಯಕ್ಷೆ ಸುನೀತಾ ಕಟಕೆ, ಶಾಮಬಾಯಿ ಹುಲಿ, ಶಿವರಾಜ ಇಂಚಗೇರಾ, ಸೂರ್ಯಕಾಂತ ಅವರಾದ(ಬಿ), ಗುರು ನಾಟೀಕಾರ ಸೇರಿ ಅನೇಕ ಗಣ್ಯರು ಪಾಲ್ಗೊಳಲಿದ್ದಾರೆ ಎಂದು ತಿಳಿಸಿದ್ದಾರೆ