ರಾಜಾ ಮದನಗೋಪಾಲ ನಾಯಕರ ಪುತ್ಥಳಿಗೆ ದೊಡ್ಡಪ್ಪ ಎಸ್.ನಿಷ್ಠಿ ಭೇಟಿ

0
13

ಸುರಪುರ: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ನಿಷ್ಠಿಯವರು ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಪುತ್ಥಳಿಗೆ ಭೇಟಿ ನೀಡಿ ಮಾಲಾರ್ಪಣೆ ಮಾಡಿ ಪುತ್ಥಳಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕ್ಲಬ್‍ನ ಅಧ್ಯಕ್ಷರಾದ ರಾಜಾ ಮುಕುಂದ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಿದರು,ಅಲ್ಲದೆ ಕ್ಲಬ್ ವತಿಯಿಂದ ದೊಡ್ಡಪ್ಪ ಎಸ್. ನಿಷ್ಠಿಯವರನ್ನು ರಾಜಾ ಮುಕುಂದ ನಾಯಕ ಸೇರಿ ಕ್ಲಬ್‍ನ ಅನೇಕ ಜನ ನಿರ್ದೇಶಕರು ಭಾಗವಹಿಸಿ ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಸಜ್ಜನ್,ಗೋಪಣ್ಣ ದೊಡ್ಮನಿ,ವಕೀಲ ಅರವಿಂದ ಕುಮಾರ,ರಾಮನಗೌಡ ಸುಬೇದಾರ, ಸೋಮನಾಥ ನಾಯಕ,ಎಸ್.ರಾಂಪುರೆ,ಗಂಗಾಧರ ರುಮಾಲ,ಮಹೇಶ ಜಾಗಿರದಾರ, ಶರಣಬಸಪ್ಪ ಯಾಳವಾರ,ಸಿದ್ದಯ್ಯ ಸ್ವಾಮಿ ಕಡ್ಲೆಪ್ಪನವರ ವiಠ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here