ಕಾಳಗಿ: ಯುವ ಕಾಂಗ್ರೆಸ್ ವತಿಯಿಂದ ಪ್ರಜಾದ್ವನಿ ಯಾತ್ರೆಯ ಪೂರ್ವಭಾವಿ ಸಭೆ

0
13

ಕಾಳಗಿ : ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಮಾಜಿ ಮುಖ್ಯ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ರವರ ನೇತೃತ್ವದಲ್ಲಿ ಪ್ರಜಾದ್ವನಿ ಯಾತ್ರೆಯ ಬಹಿರಂಗ ಸಭೆ ನಡೆಯುತ್ತಿದ್ದು. ಈ ಕಾರ್ಯಕ್ರಮದ ನಿಮಿತ್ಯ ಕಾಳಗಿಯ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜೇಶ್ ಜೆ. ಗುತ್ತೇದಾರ
ಈ ಯಾತ್ರೆಗೆ ಕಾಳಗಿ ತಾಲೂಕಿನಿಂದ ಸುಮಾರು 500 ಬೈಕ್ ನೊಂದಿಗೆ ನಾಳೆ ಬೆಳ್ಳಿಗೆ 10 ಗಂಟೆಗೆ ಕಾಳಗಿಯ ನೀಲಕಂಠ ಕಾಳೇಶ್ವರ ದೇವಸ್ಥಾನದಿಂದ ಚಿಮ್ಮಇದಲಾಯಿ ಕ್ರಾಸ್ ವರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಮಟ್ಟದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಎಂದು ತಿಳಿಸಿದ್ದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ಕಾಳಗಿ ತಾಲೂಕ ಯುವ ಕಾಂಗ್ರೇಸ್ ಅಧ್ಯಕ್ಷರಾದ ಶರಣು ಮಜ್ಜಿಗಿ, ಕಾಳಗಿ ನಗರ ಘಟಕದ ಅಧ್ಯಕ್ಷರಾದ ವೇದಪ್ರಕಾಶ್ ಮೋಟಗಿ, ಕಾಳಗಿ ತಾಲೂಕ ಕಾಂಗ್ರೇಸ್ ವಕ್ತಾರರಾದ ರಾಘವೇಂದ್ರ ಡಿ. ಗುತ್ತೇದಾರ
ಕಾಳಗಿ ಎಸ್ಸಿ ಎಸ್ ಟಿ ಅಧ್ಯಕ್ಷರಾದ ಶಿವಕುಮಾರ್ ಚಿಂತಕೋಟಿ 5 ನೇ ವಾರ್ಡ್ ನ ಅಧ್ಯಕ್ಷರಾದ ರವಿದಾಸ್ ಪತಂಗೆ, ಸಂತೋಷ ಪತಂಗೆ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here