ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ರಮಾಬಾಯಿ ಅಂಬೇಡ್ಕರ್ ಜಯಂತಿ

0
3

ಸುರಪುರ: ಸುರಪುರ ನಗರದ ಗೋಲ್ಡನ್ ಬುದ್ಧ ವಿಹಾರದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ 125 ನೇ ಜಯಂತಿಯನ್ನು ಆಚರಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಮೇಣದಬತ್ತಿಯನ್ನು ಬೆಳಗಿ ಧಮ್ಮ ಪ್ರಾರ್ಥನೆಯೊಂದಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಪಿಎಸ್ಐ ಪೂಜಾ ಖರ್ಗೆ ಟ್ರಸ್ಟ್ ನ ಅಧ್ಯಕ್ಷ ವೆಂಕಟೇಶ ಹೊಸಮನಿ, ನ್ಯಾಯಾಂಗ ಇಲಾಖೆಯ ಭೀಮರಾಯ ಬನಸೋಡೆ, ರಾಹುಲ್ ಹುಲಿಮನಿ, ವೆಂಕಟೇಶ ಸುರಪುರ, ಭೀಮರಾಯ ಸಿಂದಗೇರಿ ವೇದಿಕೆಯಲ್ಲಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಕುರಿತು ರಾಹುಲ್ ಹುಲಿಮನಿ ಹಾಗೂ ಪೂಜಾ ಖರ್ಗೆ ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಎಲ್ಲ ಯಶಸ್ವಿ ಕಾರ್ಯಗಳ ಹಿಂದೆ ರಮಾಬಾಯಿ ಅಂಬೇಡ್ಕರ್ ರವರು ಶಕ್ತಿಯಾಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಬೌದ್ಧ ಉಪಾಸಕ ಉಪಾಸಿಕ ರವರು ಭಾಗವಹಿಸಿದ್ದರು ಮಾಳಪ್ಪ ಕಿರದಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು ಭೀಮರಾಯ ಸಿಂದಗೇರಿ ವಂಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here