ಹೊನಲು ಬೆಳಕು ಪಂದ್ಯಾವಳಿಗಳ ಸಮಾರೋಪ

0
28

ಕಲಬುರಗಿ : ಡಾ. ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಹಾಗೂ ಯುವ ಘಟಕದ ನೇತೃತ್ವದಲ್ಲಿ ಫೆಬ್ರವರಿ 1 ರಿಂದ 14 ನಿರಂತರ ನಡೆಯುತ್ತಿರುವ ಪಂದ್ಯಾವಳಿಗಳ ಸಮಾರೋಪ ಸಮಾರಂಭ ಜರಗಿತು

ಸೇಡಂ ತಾಲೂಕಿನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಹೊನಲು ಬೆಳಕಿನ ಕ್ರೀಡಾಕೂಟಗಳ ಸಮಾರೋಪ ಸಮಾರಂಭದ ನಿಮಿತ್ಯ ಎಲ್ಲಾ ಕ್ರೀಡೆಗಳ ಅಂತಿಮ ಘಟ್ಟದ ಪಂದ್ಯಗಳು ನಡೆದವು

Contact Your\'s Advertisement; 9902492681

ವಿಜೇತ ಟೀಮ್ ಗಳಿಗೆ ಬಹುಮಾನ ಹಂಚಿಕೆ ನಡೆಯಿತು.
ಕಬ್ಬಡ್ಡಿ ಮೈದಾನದಲ್ಲಿ ಕಬ್ಬಡ್ಡಿ ವೀಕ್ಷಣೆ ಮಾಡಿದ
ಮಾಜಿ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಸಚಿವರು ಡಾ.ಶರಣಪ್ರಕಾಶ ಪಾಟೀಲ ಅವರು ಮಾತನಾಡಿದರು.

ಯುವ ಕಾಂಗ್ರೆಸ್ ಘಟಕ ಹಗಲು ರಾತ್ರಿ ಶ್ರಮ ವಹಿಸಿ ಉತ್ತಮವಾದ ಕ್ರೀಡಾಕೂಟ ನಡೆಸಿಕೊಟ್ಟಿದ್ದಾರೆ, ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಜೊತೆಗೆ ಸೋಲು-ಗೆಲುವವನ್ನು ಸಮಾನವಾಗಿ ಕಾಣಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್ ಸೇಡಂ.,ಸತೀಶ ರೆಡ್ಡಿ ರಂಜೋಳ, ಮಹಮ್ಮದ್ ಗೌಸ್, ರಾಮಯ್ಯ ಪೂಜಾರಿ, ಹಫೀಜ್ ರಂಜೋಳ ,ಸತ್ತರ ನಾಡೆಪಲ್ಲಿ, ಇನ್ನು ಇತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here