ಕಲಬುರಗಿ: ಜಿಲ್ಲೆಯ ಎನ್ ಹೆಚ್ ಎಂ ಅಡಿಯಲ್ಲಿ ಬರುವ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳ ಎಲ್ಲಾ ವೃಂದದಲ್ಲಿಯ ಜಿಲ್ಲಾ ಆಸ್ಪತ್ರೆ ತಾಲೂಕ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಉಪ ಕೇಂದ್ರಗಳಲ್ಲಿ 186 ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಸಂಘದಿಂದ ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಲು ಕರೆ ನೀಡಿದ್ದು ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮುಷ್ಕರದ ಮನವಿ ಪತ್ರವನ್ನು ಜಿಲ್ಲಾ ಸಮಿತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಡಾ. ಪ್ರಮೋದ್ ಗುಂಡುಗುರ್ತಿ, ಜನಾನಂದ ಪಾಟೀಲ್, ಅಂಬರೀಶ್ ಇಟ್ಟಿಗಿ, ಅಲ್ಲಂಪ್ರಭು ನಿಂಬರ್ಗಾ, ಶ್ರೀಶೈಲ ಹಿರೇಮಠ, ಮಲ್ಲಿಕಾರ್ಜುನ್ ಸಿಂಗ್, ಅನ್ನಪೂರ್ಣ ನಾಯ್ಕೋಡಿ, ಸಲೀಮಾ ಬೇಗಂ, ಗುರುನಾಥ್, ದೇವಾನಂದ್ ದೊಡ್ಮನಿ, ಬಸವರಾಜ ರೆಡ್ಡಿ, ನಟರಾಜ ಕಿಣಗಿಕರ್ ಸೇರಿದಂತೆ ಇತರರು ಇದ್ದರು.