ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದಕ್ಕೆ ಅಭಿನಂದನೆ

0
12

ಕಲಬುರಗಿ: ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರುಗಳಿಗೆ ಕಲಬುರಗಿ ಜಿಲ್ಲಾ ಹಿಂದೂ ಗಾಣಿಗರ ಸಂಘದ ಅಧ್ಯಕ್ಷ ಶರಣಕುಮಾರ ಬಿಲ್ಲಾಡ ಹಾಗೂ ಕಾರ್ಯದರ್ಶಿ ಈಶ್ವರ ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಗಾಣಿಗ ಸಮಾಜದ ಬಹುದಿನಗಳ ಬೇಡಿಕೆ ಹಾಗೂ ಹೋರಾಟಕ್ಕೆ ಸ್ಪಂದಿಸಿದ ಕರ್ನಾಟಕ ಘನ ಸರ್ಕಾರವು ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಮೂಲಕ. ಇಡೀ ಗಾಣಿಗ ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವುದು.

Contact Your\'s Advertisement; 9902492681

ಗಾಣಿಗ ಸಮಾಜದ ಪರಮಪೂಜ್ಯರ ನೇತೃತ್ವದಲ್ಲಿ ಸಮಾಜ ಬಂಧುಗಳ ಬೆಂಬಲದಿಂದ ನಡೆದ ಹೋರಾಟಕ್ಕೆ ಬೆಂಬಲಿಸಿದ ಎಲ್ಲ ರಾಜಕೀಯ ಮುಖಂಡರಿಗೂ ಹಾಗೂ ಎಲ್ಲ ಜಿಲ್ಲೆಗಳ ಗಾಣಿಗ ಸಮಾಜದ ಅಧ್ಯಕ್ಷರುಗಳು, ಹಾಗೂ ಪದಾಧಿಕಾರಿಗಳಿಗೆ. ಕಲಬುರಗಿ ಜಿಲ್ಲಾ ಹಿಂದೂ ಗಾಣಿಗರ ಸಂಘ, ಕಲಬುರಗಿ ಗಾಣಿಗ ನೌಕರರ ಸಂಘ, ಹಾಗೂ ಗಾಣಸಿರಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರು ಅಭಿನಂದಿಸಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here