ರಾಯಣ್ಣ ಜಯಂತಿ ಅಂಗವಾಗಿ 1001 ಸಸಿ ನೆಡುವ ಕಾರ್ಯಕ್ರಮ: ಯಲ್ಲಾಲಿಂಗ ಪೂಜಾರಿ

0
102

ಅಫಜಲಪುರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಶುತ್ಸವದ ಅಂಗವಾಗಿ 1001 ಸಸಿ ನೆಡುವ ಕಾರ್ಯಕ್ರಮ ಮತ್ತು ಕೆ.ಆರ್.ಐ.ಡಿ.ಎಲ್ ಎಇಇ ಜೆ.ಎಮ್. ಕೊರಬು ಅವರ ವಯೋನಿವ್ರತ್ತಿ ಹಾಗೂ ವೀರ ಯೋಧರಿಗೆ ಸನ್ಮಾನ ಸಮಾರಂಭವನ್ನು ಆಗಸ್ಟ್ 15ರಂದು ಬಳೂರ್ಗಿಯ ಜಗದಂಬಾ ವಿದ್ಶಾವರ್ಧಕ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕಾಧ್ಶಕ್ಷ ಯಲ್ಲಾಲಿಂಗ ಕೆ. ಪೂಜಾರಿ ಹೇಳಿದರು.

ಅಂದು ನಡೆಯುವ ಕಾರ್ಯಕ್ರಮದಲ್ಲಿ ಗೌರ್ (ಬಿ) ಗ್ರಾಮದ ಅಭಿನವ ಯಲ್ಲಾಲಿಂಗ ಮಹಾರಾಜರು ದಿವ್ಶ ಸಾನಿಧ್ಶ ವಹಿಸುವರು. ಶಾಸಕ ಎಂ.ವೈ. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕಾಧ್ಶಕ್ಷ ಯಲ್ಲಾಲಿಂಗ ಕೆ. ಪೂಜಾರಿ ಅಧ್ಶಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಸದಸ್ಶ ಬೀರಣ್ಣ ಆರ್. ಕಲ್ಲೂರ್ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡುವರು. ಮಾಜಿ ಜಿಪಂ ಸದಸ್ಶ ಪ್ರಕಾಶ ಜಮಾದಾರ ಪೋಟೋ ಪೂಜೆ ನೆರವೇರಿಸುವರು. ಬಳೂರ್ಗಿ ಗ್ರಾಪಂ ಅಧ್ಶಕ್ಷೆ ಕಸ್ತೂರಿಬಾಯಿ ದತ್ತು ಪೂಜಾರಿ ಜ್ಶೋತಿ ಬೆಳಗಿಸುವರು. ಸಂಪನ್ಮೂಲ ವ್ಶಕ್ತಿಗಳಾಗಿ ವಕೀಲ ಕೆ.ಜಿ ಪೂಜಾರಿˌ ಅರಣ್ಶಾಧಿಕಾರಿ ಡಾ.ರಮೇಶ ಭಾಗವಹಿಸುವರು.

Contact Your\'s Advertisement; 9902492681

ಮುಖ್ಶಅತಿಥಿಗಳಾಗಿ ಮಾಜಿ ಜಿಪಂ ಸದಸ್ಶರಾದ ಸಿದ್ದಾರ್ಥ ಬಸರಿಗಿಡˌ ಮತೀನ ಪಟೇಲˌ ಕಾಂಗ್ರೆಸ್ ಮುಖಂಡ ಪಪ್ಪು ಪಟೇಲˌ ಗುತ್ತಿಗೆದಾರ ದಯಾನಂದ ದೊಡ್ಮನಿˌ ದಸಂಸಮಿತಿಯ ಮಾಲಿಂಗ್ ಅಂಗಡಿˌ ವಕೀಲ ಪದ್ಮರಾಜ ಪೂಜಾರಿ ಭಾಗವಹಿಸುವರು. ಅತಿಥಿಗಳಾಗಿ ಫಲಾಸಿಂಗ್ ರಾಠೋಡˌ ಅರವಿಂದ ದೊಡ್ಮನಿˌ ಶ್ರೀಕಾಂತ ದಿವಾರಾಜˌ ಕುಪೇಂದ್ರ ಸಿಂಗೆ ಭಾಗವಹಿಸುವರು.

ಅಣ್ಣಾರಾಯ ಪಾಟೀಲ ನಿರುಪಿಸುವರು. ತಾಲೂಕಿನ ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳುˌ ಹಿತೈಸಿಗಳುˌ ಪ್ರಗತಿಪರರು ಹೆಚ್ಚಿನ ಸಂಖ್ಶೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲೂಕಾಧ್ಶಕ್ಷ ಯಲ್ಲಾಲಿಂಗ ಕೆ. ಪೂಜಾರಿ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here