ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾರ್ಥಕ ಬದುಕು; ಶಿವಶರಣಪ್ಪ ಮೂಳೆಗಾಂವ

0
56

ಕಲಬುರಗಿ: ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿರುವ ಪಠ್ಯಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ. ಅದರಲ್ಲಿ ನೀವು ಬದುಕನ್ನು ಕಟ್ಟಿಕೊಳ್ಳುವ ಮಾರ್ಗವಿದೆ. ಅದನ್ನು ಹುಡುಕುವ ಕೆಲಸ ಮಾಡಬೇಕು. ಒಂದು ವೇಳೆ ಶೈಕ್ಷಣಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ತೊಂದರೆಯಿಲ್ಲ. ಆದರೆಜೀವನದ ಪರೀಕ್ಷೆಯಲ್ಲಿ ಫೇಲಾದರೆಜೀವನ ವ್ಯರ್ಥವಾಗುತ್ತದೆ ಎಂದು ಪಪೂಶಿ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.

ಜೇವರ್ಗಿಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ಭಾನುವಾರಏರ್ಪಡಿಸಲಾಗಿದ್ದಕಾಲೇಜಿನ ವಾರ್ಷಿಕೋತ್ಸವ, ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಪ್ರತಿಭಾ ಪುರಸ್ಕಾರಸಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ವಿದ್ಯಾರ್ಥಿಗಳಿಗೆ ಶಿಕ್ಷಕರು, ಪಾಲಕ-ಪೋಷಕ ವರ್ಗದವರು ಮಾರ್ಗದರ್ಶನ ಮಾಡಬಹುದೇ ಹೊರತು, ಜೀವನ ನಿರ್ಮಿಸಲು ಸಾಧ್ಯವಿಲ್ಲ. ನೀವು ಸ್ವಯಂ ಶಿಲ್ಪಿಗಳಾಗಬೇಕು. ಮೌಢ್ಯತೆ, ಕಂದಾಚಾರದಿಂದ ಹೊರಬನ್ನಿ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ. ಶಕ್ತಿಶಾಲಿಗಳಾಗಿ, ನಿರಂತರಅಧ್ಯಯನದಿಂದಉತ್ತಮ ಫಲಿತಾಂಶ ಪಡೆದುಕಾಲೇಜಿನಕೀರ್ತಿಯನ್ನು ಹೆಚ್ಚಿಸುವಂತೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.

ಯಡ್ರಾಮಿ ವಿರಕ್ತ ಮಠದ ಪೂಜ್ಯ ಸಿದ್ದಲಿಂಗ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿದೆಸೆಯಿಂದಲೇದೇಶಪ್ರೇಮ, ಭ್ರಾತೃತ್ವ ಭಾವನೆ ಮೈಗೂಡಿಸಿಕೊಳ್ಳಿ. ತಂದೆ-ತಾಯಿ, ಗುರು-ಹಿರಿಯರಿಗೆಗೌರವ ನೀಡಿ. ಯಾರೇ ಆಗಲಿ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ. ಸೂಕ್ತ ಯೋಚನಾ ಶಕ್ತಿ ಇರಲಿ. ಸ್ವಾರ್ಥಜೀವನಕ್ಕಿಂತ, ಸಾರ್ಥಕಜೀವನ ಶ್ರೇಷ್ಠವಾಗಿದೆ. ಅಂಕಪಟ್ಟಿಯಿಂದ ಮಾತ್ರಜೀವನ ನಿರ್ಧಾರವಾಗದು. ಅನೇಕ ಮಹನೀಯರಜೀವನ, ಸಾಧನೆಯ ದೃಷ್ಟಾಂತಗಳೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಸಿಬಿಸಿ ಉಪಾಧ್ಯಕ್ಷರವೀಂದ್ರಕುಮಾರ ವೈ.ಕೋಳಕೂರ್, ಪ್ರಾಚಾರ್ಯರುಗಳಾದ ಮೊಹ್ಮದ ಅಲ್ಲಾ ಉದ್ದೀನ ಸಾಗರ, ಬಸವರಾಜ ಬಿರಾಜಾದಾರ, ಶಿವಶರಣಪ್ಪ ಮಸ್ಕನಳ್ಳಿ, ಶ್ರೀಶೈಲ್ ಖಣದಾಳ, ಅಮಿನಪ್ಪ ಹೊಸಮನಿ, ಪಿಎಸ್‍ಐ ಶಿವರಾಜ ಪಾಟೀಲ, ಪ್ರಮುಖರಾದ ಶಾಂತಪ್ಪಜೈನ್, ಶರಣು ಹಿರೇಮಠ ವೇದಿಕೆ ಮೇಲಿದ್ದರು.

ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ಶರಣಮ್ಮ ಭಾವಿಕಟ್ಟಿ, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ಪ್ರಕಾಶ ಪಾಟೀಲ,ರೇಣುಕಾಚಿಕ್ಕಮೇಟಿ, ರಾಮಚಂದ್ರಟಿ.ಹಕ್ಕಿ, ಸಿದ್ದಾರೂಢ ಬಿರಾದಾರ, ದೇವೇಂದ್ರಪ್ಪ ಬಡಿಗೇರ್, ನೇಸರ ಎಂ.ಬೀಳಗಿಮಠ, ರಂಜಿತಾಠಾಕೂರ, ಸಮೀನಾ ಬೇಗಂ, ಮಂಜುನಾಥ ಅಳ್ಳಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಜರುಗಿತು. ವಿದ್ಯಾರ್ಥಿಗಳು ಸಮಸ್ತ ಸಿಬ್ಬಂದಿಗೆ ಸತ್ಕರಿಸಿದರು. ದ್ವಿತೀಯ ಪಿಯುಎಲ್ಲಾ ವಿದ್ಯಾರ್ಥಿಗಳಿಗೆ ಪುಷ್ಪವೃಷಿಯ ಮೂಲಕ ಶುಭಾಷಯಕೋರಿ, ಬಿಳ್ಕೋಡಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here