ಕಲಬುರಗಿ: ಕಳೆದ ಹಲವಾರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬಿ.ಡಿ. ಹಿರೇಮಠ ರವರ ನೇತೃತ್ವದಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಯುತ್ತಿದ್ದು, ಸದರಿ ಕರ್ನಾಟಕ ಸರಕಾರ, ಇದರ ಬಗ್ಗೆ ಗಮನ ಹರಿಸದೇ ಕಾಲ ಕಳೆಯುತ್ತಿರುವುದು ಖೇದಕರ್ವಾಗಿದ್ದು, ಕೂಡಲೇ ಬೇಡಿಕೆ ಇಡೇರಿಸಬೇಕು ಮತ್ತು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಆಗಿರುವ ಕಲಬುರಗಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆ ಅಧ್ಯಕ್ಷ ಡಾ. ಸಂಪತ್ ಜೆ. ಹಿರೇಮಠ ಅವರು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾಲಿಂಗ ಹಿರೇಮಠ (ನಂದೂರ), ಮಂಜು ಮಠಪತಿ (ಕುಸನೂರ), ವಿಜಯಲಕ್ಷ್ಮೀ ಹಿರೇಮಠ, ಅಂಬರೇಶ ಮಠಪತಿ, ಸಿದ್ಧಅಂಗಯ್ಯ ಮಠ, ಶ್ರೀಕಾಂತ ಹಿರೇಮಠ, ವಿರೇಶ ವೀರಣಗುಡಿ, ನಾಗಯ್ಯ ಮಠಪತಿ ಇದ್ದರು.