ವಿವಿಧ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ

0
24

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಕಲ್ಯಾಣ ನಾಡು ವಿಕಾಸ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಕೂಟ ಉತ್ಸವ ಸಮಾರಂಭ ಹಾಗೂ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹಿರಿಯ ಹೋರಾಟಗಾರ  ಲಕ್ಷ್ಮಣ ದಸ್ತಿ ರವರು ಚಾಲನೆ ನೀಡಿದ್ದರು.

ಹಂಪಿ ಉತ್ಸವ, ಬನವಾಸಿ ಉತ್ಸವ, ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವ, ಮೈಸೂರು ದಸರಾ ಉತ್ಸವದಂತೆ ಕಲಬುರಗಿಯಲ್ಲಿ ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಆಚರಿಸಬೇಕೆಂದು ದಸ್ತಿ ರವರು ಹೇಳಿದ್ದರು, ಕನ್ನಡಕ್ಕೆ ಮೊಟ್ಟ ಮೊದಲ ಘನತೆ ನೀಡಿದ ಹೆಗ್ಗಳಿಕೆ ಕಲ್ಯಾಣ ನಾಡುಗೆ ಸಲ್ಲುತ್ತದೆ ಈ ನೆಲದ ಸಂಸ್ಕøತಿಕ, ಸಾಮರಸ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ.  ಈ ನಿಟ್ಟಿನಲ್ಲಿ ಸರಕಾರವೇ ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಮಾಡಬೇಕೆಂದು ದಸ್ತಿ ರವರು ಒತ್ತಾಯಿಸಿದ್ದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿ ಮಾತನಾಡಿದ್ದ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷರಾದ  ಭೀಮಾಶಂಕರ ಪಾಟೀಲ್ ರವರು ಮಾತನಾಡಿ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗವಾಗಿ ಕಲಬುರಗಿಯಲ್ಲಿ ಈ ಭಾಗದ ಜನರಿಗೆ ಸಾಹಿತ್ಯ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದವರನ್ನು ಗುರುತಿಸಿ ಕಲ್ಯಾಣ ನಾಡು ವಿಕಾಸ ವೇದಿಕೆಯು ಸನ್ಮಾನಿಸಿದ್ದು ಜೊತೆಗೆ ರಾಜ್ಯ ಸರಕಾರವೂ ಮಾಡಬೇಕಾಗಿರುವ ಉತ್ಸವವನ್ನು ಒಂದು ಸಂಘಟನೆಯಾಗಿ ಕಲ್ಯಾಣ ನಾಡು ವಿಕಾಸ ವೇದಿಕೆಯು ರಾಷ್ಟ್ರಕೂಟ ಉತ್ಸವವನ್ನು ಮಾಡಿದ್ದು ಹೆಮ್ಮೆಯ ವಿಷಯವೆಂದು ಹೇಳಿದ್ದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಗತಿ ಪರ ಚಿಂತಕರಾದ ಶ್ರೀ ಸುನೀಲ ಕುಲಕರ್ಣಿ ರವರು ಮಾತನಾಡಿ ರಾಷ್ಟ್ರಕೂಟರ ಸಾಮ್ರಾಜ್ಯವು ನರ್ಮದಾ ನದಿಯಿಂದ ಕಾವೇರಿ ನದಿಯವರೆಗೆ ಹಬ್ಬಿದ್ದು ಅಜಂತಾ-ಎಲ್ಲೋರಾ ಹಾಗೂ ಎಲಿಫೆಂಟಾ ಎಂಬ ಸ್ಥಳಗಳಲ್ಲಿ ನಿರ್ಮಿಸಿರುವ ಸ್ಮಾರಕಗಳು ಯುನೆಸ್ಕೋ ಪಟ್ಟಿಯಲ್ಲಿದ್ದು ಅವುಗಳನ್ನು ರಾಷ್ಟ್ರಕೂಟರು ನಿರ್ಮಿಸಿದ್ದಾರೆಂದು ಹೇಳಿದ್ದರು.

ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ಎಸ್. ನಡಗೇರಿ ರವರು ಸಮಾರಂಭದ ನೇತೃತ್ವವನ್ನು ವಹಿಸಿ ಜಗತ್ತಿನ ನಾಲ್ಕು ಮಹಾನ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಒಂದು.  ಭಾರತ ದೇಶದ ಅರ್ಧ ಭೂಭಾಗವನ್ನು ಆಳ್ವಿಕೆ ಮಾಡಿದ್ದ ಮಹಾನ ದೊರೆಗಳು ರಾಷ್ಟ್ರಕೂಟರಾಗಿದ್ದಾರೆ.  ರಾಷ್ಟ್ರಕೂಟ ದೊರೆಗಳು ಸುಮಾರು 230 ವರ್ಷಗಳ ಕಾಲ ಆಳ್ವಿಕೆ ಮಾಡಿ ಸುಮಾರು 15 ದೊರೆಗಳು ಆಡಳಿತವನ್ನು ಮಾಡಿದ್ದಾರೆ ಅದರಲ್ಲಿ ಸಾಮ್ರಾಟ್ ಅಮೋಘವರ್ಷ ನೃಪತ್ತುಂಗ ದೊರೆಗಳು 64 ವರ್ಷಗಳ ಕಾಲ ಆಳ್ವಿಕೆ ಮಾಡಿ ಸಾಹಿತ್ಯ, ಆಡಳಿತ, ಕಲೆ ವಾಸ್ತುಶಿಲ್ಪಾ, ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ಮಾಡಿದ್ದಾರೆ.

ಕನ್ನಡಕ್ಕೆ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗ ನೀಡಿದ ಶ್ರೀ ವಿಜಯ ಹಾಗೂ ಭಾರತ ದೇಶಕ್ಕೆ ಹಿಂದು ಕಾನೂನ್ನು ಗ್ರಂಥ ನೀಡಿದ್ದ ವಿಜ್ಞಾನೇಶ್ವರರು ರಾಷ್ಟ್ರಕೂಟರ ಕಾಲಿನಲ್ಲಿದ್ದ ಸಾಹಿತಿಗಳಾಗಿದ್ದರು.  ಪ್ರಜೆಗಳ ಕ್ಷೇಮಕ್ಕಾಗಿ ಭೀಕರ ಬರಗಾಲದ ಸಮಯದಲ್ಲಿ ರಾಜ್ಯದಲ್ಲಿ ತಲೆದೂರಿದ ಬರಗಾಲವನ್ನು ತೊಲಗಿಸುವ ಸಲ್ಲುವಾಗಿ ಕೊಲ್ಹಾಪೂರದ ಶ್ರೀ ಮಹಾಲಕ್ಷ್ಮೀ ದೇವಿಯಲ್ಲಿ ಪ್ರಾರ್ಥನೆ ಮಾಡಿ ತಮ್ಮ ಕಿರು ಬೆರಳನ್ನು ನೀಡಿ ಬರಗಾಲ ನಿಯಂತ್ರಣಕ್ಕಾಗಿ ಬೇಡಿಕೊಂಡಿದ್ದರು ಇಂತಹ ಮಹಾನ ಸಾಮ್ರಾಜ್ಯ ಮತ್ತು ಸಾಮ್ರಾಟ್ ಅಮೋಘವರ್ಷ ನೃಪತ್ತುಂಗರ ಅಸ್ತಿತ್ವವು ಉಳಿಯಲು ಹಾಗೂ ಮುಂದಿನ ಪಿಳಿಗೆಯು ರಾಷ್ಟ್ರಕೂಟರ ಎಲ್ಲಾ ರೀತಿಯ ಆಡಳಿತವನ್ನು ನೆನಪಿನಲ್ಲಿಟ್ಟುಕೊಳ್ಳಲು ಹಾಗೂ ಬೇರೆ ಕಡೆಗಳಲ್ಲಿ ಆಚರಿಸುತ್ತಿರುವ ಉತ್ಸವಗಳಂತೆ ಕಲಬುರಗಿಯಲ್ಲಿಯೂ ರಾಜ್ಯ ಸರಕಾರವು ಪ್ರತಿವರ್ಷ ರಾಷ್ಟ್ರಕೂಟರ ಉತ್ಸವನ್ನು ಆಚರಿಸಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿದ್ದರು.

ಇದೇ ವೇಳೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ರಾಮಕೃಷ್ಣ ಬಡಶೇಶಿ, ಪ್ರಭುಲಿಂಗ ನೀಲೂರೆ, ಮನೀಶ ಜಾಜು, ಆದೀನಾಥ ಹೀರಾ, ಲಿಂಗರಾಜ ಶಿರಗಾಪೂರ, ಭೀಮಶೇಟ್ಟಿ ಮುಕ್ಕಾ, ಡಾ. ಎ.ಎಸ್. ಭದ್ರಶೇಟ್ಟಿ ಹಾಗೂ ಎಮ್.ಸಿ. ಕೋರಶೇಟ್ಟಿ ರವರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.

ವೇದಿಕೆಯ ಮೇಲೆ ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಮಾಜಿ ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ಮಾಜಿ ಮಹಾಪೌರರಾದ ಶರಣು ಮೋದಿ, ಹಾಗೂ ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಘಟಕರಾದ ಬಾಬು ಮದನಕರ, ಉದಯಕುಮಾರ ಖಣಗೆ, ಸೂರ್ಯಪ್ರಕಾಶ ಚಾಳಿ, ಜೈಭೀಮ ಮಾಳಗೆ, ಅವಿನಾಶ ಕಪನೂರ, ಮಹೇಶ ಮಾನೆ, ವಿಜಯಕುಮಾರ ಕಂಬಾರ, ಪಂಡಿತ ಮದಗುಣಕ್ಕಿ, ಸಿದ್ದಲಿಂಗ ಉಪ್ಪಾರ, ನಾಗು ಡೊಂಗರಗಾಂವ, ರಾಕೇಶ ಕೋರವಾರ, ದೇವು ದೊರೆ, ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here