ಭಾರತೀಯ ಆಡಳಿತ ಫೆಲೋಷಿಪ್ ಕಾರ್ಯಕ್ರಮ; ನಡ್ಜ್ ಫೌಂಡೇಶನ್ ಜೊತೆಗೆ ಒಡಂಬಡಿಕೆ

0
25

ಬೆಂಗಳೂರು; ಕರ್ನಾಟಕದಲ್ಲಿ ಭಾರತೀಯ ಆಡಳಿತ ಫೆಲೋಷಿಪ್ ಕಾರ್ಯಕ್ರಮವು ಒಂದು ಹೊಸ ಮಾದರಿಯಾಗಿದ್ದು, ಜುಲೈ 2021 ರಂದು ನಡ್ಜ್ ಫೌಂಡೇಶನ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.

ಕಾರ್ಯಕ್ರಮದಡಿ ರಾಜ್ಯದ ವಿಮರ್ಶಾತ್ಮಕ ಅಭಿವೃದ್ಧಿ ಸವಾಲುಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ 10 ಜನ ಭಾರತೀಯ ಆಡಳಿತ ಫೆಲೋಷಿಪ್ ಕಾರ್ಯನಿರ್ವಾಹಕರನ್ನು ಸರ್ಕಾರದ ವಿವಿಧ ಇಲಾಖೆಗಳಲ್ಲಿ 18 ತಿಂಗಳವರೆಗೆ ನವೀನ ಯೋಜನೆಗಳನ್ನು ಕೈಗೊಳ್ಳಲು ಆಯ್ಕೆ ಮಾಡಿಕೊಳ್ಳಲಾಗಿತ್ತು.

Contact Your\'s Advertisement; 9902492681

ಇವರು 18 ತಿಂಗಳುಗಳಲ್ಲಿ ಅಧ್ಯಯನ ಕೈಗೊಂಡು ಸಾಧಿಸಿದ ಪ್ರಗತಿ ವರದಿಯು ಅವರುಗಳ ಅನುಭವದ ಆಧಾರದ ಮೇಲೆ ಮಾಡಲಾಗಿದೆ. ಈ ಒಂದು ಯೋಜನೆಯನ್ನು ನೀತಿ ಆಯೋಗವು ಪರಿಶೀಲಿಸಿ ಬೇರೆ ರಾಜ್ಯಗಳು ಸಹ ಅನುಸರಿಸಲು ಸೂಚಿಸಿರುತ್ತದೆ. ದಿನಾಂಕ 12.12.2022 ರಂದು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಅವರಿಗೆ ಸಮಾರೋಪ ಸಮಾರಂಭವನ್ನು ಮಾಡಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.

ಈಗಾಗಲೇ ಪಂಜಾಬ್, ಗುಜರಾತ್ ಇತ್ಯಾದಿ ಕೆಲವು ರಾಜ್ಯಗಳಲ್ಲಿ ಇದೇ ಮಾದರಿಯನ್ನು ಅನುಸರಿಸುತ್ತಿರುವುದು ಸಂತೋಷದ ವಿಷಯ. ಪ್ರಸ್ತುತ 2023-24ನೇ ಸಾಲಿನಲ್ಲಿ ಪರಿಷ್ಕøತ ಒಡಂಬಡಿಕೆಯನ್ನು ನಡ್ಜ್ ಫೌಂಡೇಷನ್ ಜೊತೆಗೆ ಮಾಡಿಕೊಳ್ಳಲಾಗಿದೆ. ಅದರ ಪ್ರಮುಖ ವಿಷಯಗಳು ಬಡತನ ನಿರ್ಮೂಲನೆ ಹಾಗೂ ಆದಾಯ ಬೆಳವಣಿಗೆ, ಪೌಷ್ಟಿಕತೆ ಹಾಗೂ ಉತ್ತಮ ಆರೋಗ್ಯ, ಗುಣಾತ್ಮಕ ಕಲಿಕಾ ಫಲಿತಾಂಶ ಉತ್ತಮಪಡಿಸುವಿಕೆ (learning outcome), ಲಿಂಗ ಸಮಾನತೆ, ಕೌಶಲ್ಯಾಭಿವೃದ್ಧಿ, ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ, ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ  ನಿರ್ವಹಣೆ, ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ ಸ್ಥಾಪನೆ, ಸಮಗ್ರ ಯುವಜನರ ಸಬಲೀಕರಣ,ಅರ್ಥಿಕ ಇಲಾಖೆಗೆ ಸಂಬಂಧಿಸಿದಂತೆ ಸಂಪನ್ಮೂಲ ಕ್ರೋಢೀಕರಣ.

28 ರಂದು ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಡಾ. ಶಾಲಿನಿ ರಜನೀಶ್ ಮತ್ತು ನಡ್ಜ್ ಫೌಂಡೇಷನ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸುಧಾ ಶ್ರೀನಿವಾಸನ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here