ಸುರಪುರ: ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ

0
9

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕಿನ ವಿಕಲಚೇತನರಿಗಾಗಿ ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿರಿಯ್ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್, ಅಸೋಸಿಯೇಷನ್ ಆಫ್ ಪೀಪಲ್ ವಿತ್ ದಿಸೆಬಿಲಿಟಿ ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರಿಗೆ ಬಳಸುವ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ರಿಕ್ರಿಯೇಶನ್ ಅಧ್ಯಕ್ಷ ರಾಜಾ ಮುಕುಂದ ನಾಯಕ್, ವಿಶೇಷ ಚೇತನರ ಸೇವೆ ದೇವರ ಸೇವೆ ಈ ಸಂಸ್ಥೆ ವಿಕಲಚೇತನರ ಬಾಳಲ್ಲಿ ಜ್ಯೋತಿಯಾಗಿ ಬೆಳಗಲಿ ಎಂದು ಪ್ರಶಂಸಿಸಿದರು.

Contact Your\'s Advertisement; 9902492681

ಪ್ರಸ್ತಾವಿಕ ಮಾತನಾಡಿದ ಎ ಪಿ ಡಿ ಸಂಸ್ಥೆಯ ಮುಖ್ಯಸ್ಥರಾದ ಮಧುಸೂದನ್ ರವರು, ವಿಕಲಚೇತನರು ಸ್ವತಂತ್ರವಾಗಿ ತಮ್ಮ ಬಾಳನ್ನು ನಿರ್ಮಿಸಿಕೊಳ್ಳಲು ಈ ಸಂಸ್ಥೆ ಅಜೀಂ ಪ್ರೇಮ್ ಜಿ ಫೌಂಡೇಶನ್ ಆರ್ಥಿಕ ನೆರವಿನೊಂದಿಗೆಯಾವಾಗಲೂ ಶ್ರಮವಹಿಸುತ್ತದೆ ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಮಾತನಾಡುತ್ತಾ, ವಿಕಲಚೇತನರಿಗೆ ಉಪಯೋಗವಾಗುವಂತಹ ಸಾಧನ ಸಲಕರಣೆಗಳನ್ನು ಈ ಸಂಸ್ಥೆ ಪೂರೈಸಿ ಅವರ ಮುಖದಲ್ಲಿ ಖುಷಿ ಮೂಡಿರುವುದು ಸಂತಸ ತಂದಿದೆ ಎಫಿಡಿ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಜಾ ಪಾಮ್ ನಾಯಕ್, ನಗರ ಸಭೆ ಸದಸ್ಯರಾದ ಸೋಮನಾಥ್ ದೊಣ್ಣೆಗೇರಿ, ಚಂದ್ರಶೇಖರ್ ಪವಾರ್ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು,ಪಂಡಿತ್ ನಿಂಬೂರೇ ಕ್ಷೇತ್ರ ಸಮನ್ವಯಾಧಿಕಾರಿಗಳು, ಅಜೀಮ್ ಪ್ರೇಮ್ಜೀ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಸಚಿನ್ ಕುಮಾರ್ ಅನಿಲ್ ಔಶಾ ಎಪಿಎಫ್, ಮಾಳಪ್ಪ ಪೂಜಾರಿ ಎಂ ಆರ್ ಡಬ್ಲ್ಯೂ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಚೇತನರಿಗೆ ತ್ರಿಚಕ್ರ ವಾಹನ ಕೃತಕ ಕಾಲುಗಳು ಅವರು ಸ್ವತಂತ್ರವಾಗಿ ನಡೆಯಲು ಸಹಾಯವಾಗುವ ಸಲಕರಣೆಗಳು ಹೀಗೆ 110 ಜನ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಎ ಪಿ ಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳು ಅನೇಕ ಪಾಲಕ ಪೋಷಕರು ಭಾಗವಹಿಸಿದ್ದರು.

ಸೂಫಿಯ ಪ್ರಾರ್ಥಿಸಿದರು ಅನ್ವರ್ ಜಮಾದಾರ್ ಕಾರ್ಯಕ್ರಮ ನಿರೂಪಿಸಿದರು ರಾಜಶೇಖರ್ ದೇಸಾಯಿ ಸ್ವಾಗತಿಸಿದರು ಸುನಿಲ್ ಕುಮಾರ್ ಹುಲ್ಯಾಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here