ದಾಲ್‌ಮಿಲ್ ಅಸೋಸಿಯೇಷನ್ ವತಿಯಿಂದ ನೆರೆ ಸಂತ್ರಸ್ತರಿಗೆ 100 ಕ್ವ್ವಿಂಟಲ್ ತೊಗರಿ ಬೇಳೆ ವಿತರಣೆ: ನಿಗ್ಗುಡಗಿ

0
35

ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿರುವ ಎಸ್.ಬಿ.ಪಾಟೀಲ್ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಗುಲ್ಬರ್ಗ ದಾಲ್‌ಮಿಲ್ ಅಸೋಸಿಯೇಷನ್ ಸಭೆಯಲ್ಲಿ ನೆರೆ ಸಂತ್ರಸ್ತರಿಗೆ ತೊಗರಿ ಬೇಳೆ ಕಳುಹಿಸುವ ಸಂಬಂಧ ಗುಲ್ಬರ್ಗ ದಾಲ್‌ಮಿಲ್ ಸೋಶಿಯೇಷನ್ ಅಧ್ಯಕ್ಷ ಶರಣಪ್ಪ ನಿಗ್ಗುಡಗಿ ಮಾತನಾಡಿದರು.

ಪ್ರವಾಹದಿಂದ ಸಂತ್ರಸ್ತರಾದವರಿಗೆ ಗುಲ್ಬರ್ಗ ದಾಲ್‌ಮಿಲ್ ಸಂಸ್ಥೆ 100 ಕ್ವಿಂಟಲ್ ತೊಗರಿ ಬೇಳೆ ನೀಡಿದೆ ಈಗಾಗಲೇ ಈ ತೊಗರಿ ಬೇಳೆ ಸಂಗ್ರಹಿಸಿದ್ದು, ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಅವರು ಯಾವ ಜಿಲ್ಲೆಗೆ ಕಳುಹಿಸಬೇಕು ಎಂದು ಸೂಚಿಸುತ್ತಾರೋ ಅಲ್ಲಿಗೆ ಕಳುಹಿಸಲಾಗುವುದು ಎಂದು ನಿಗ್ಗುಡಗಿ ತಿಳಿಸಿದ್ದಾರೆ.

Contact Your\'s Advertisement; 9902492681

ಸಂಘದ ಕಾರ್ಯದರ್ಶಿ ಶರಣಬಸಪ್ಪ ಮಚೆಟ್ಟಿ, ಉಪಾಧ್ಯಕ್ಷರಾದ ಚಂದ್ರಶೇಖರ್ ಕೋಬಾಳ, ಚಂದ್ರಶೇಖರ್ ತಳ್ಳಳ್ಳಿ, ಜಂಟಿ ಕಾರ್ಯದರ್ಶಿ ನಾಗಣ್ಣ ಕಲಶೆಟ್ಟಿ, ಖಜಾಂಚಿ ಹಣಮಂತರಾಯ ತೋಟ್ನಳ್ಳಿ, ಸದಸ್ಯರಾದ ಲಿಂಗಬಸಪ್ಪ ರೈನದ್, ಶಿವರಾಜ್ ಪಾಟೀಲ್, ಶಿವಶರಣಪ್ಪ ಹೂಗಾರ, ನದಿಸಿನ್ನೂರ, ಅಮೃತ ಮದುಗುಣಕಿ, ನಿಜಾಮುದ್ದಿಣ್ ತೇಲಿ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here