ಅಂಬೇಡ್ಕರ್ ನಿಗಮದ ಡಿ.ಎಂ ಸುಧೀರ್ ವರ್ಗಾವಣೆಗೆ ಆಗ್ರಹ

0
14

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಸುಧೀರ್ ಇವರಿಗೆ ವರ್ಗಾವಣೆ ಮಾಡಬೇಕೆಂದು ಕರುನಾಡ ಕಾರ್ಮಿಕರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಸಿಂಗೆ ಹಾಗೂ ದಲಿತ ಮಾದಿಗ ಸಮನ್ವಯ ಸಮಿತಿಯ ರಾಜ್ಯ ಕಾರ್ಯದರ್ಶಿ ಅನಿಲಕುಮಾರ ಶಹಾಪೂರ ಇವರು ಬೆಂಗಳೂರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ವ್ಯವಸ್ಥಾಪಕರಾದ ಸುಧೀರ ಇವರು ಕಳೆದ 9 ತಿಂಗಳಿನಿಂದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇವರು ಜಿಲ್ಲಾ ವ್ಯವಸ್ಥಾಪಕರ ಹುದ್ದೆಯಲ್ಲಿದ್ದು, ನಿಗಮದ ಪ್ರಗತಿ ತುಂಬ ಕುಂಟಿತವಾಗಿದ್ದು, ಕಾರಣ ಜಿಲ್ಲಾ ವ್ಯವಸ್ಥಾಪಕರು ನಿಗಮದ ಅಧಿಕಾರಿ ಇಲ್ಲದ ಕಾರಣ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ತುಂಬಾ ವಿಳಂಬ ಮಾಡುತ್ತಿರುತ್ತಾರೆಂದು ತಿಳಿದು ಬಂದಿದ್ದು ಹಾಗೂ ಜಿಲ್ಲಾ ವ್ಯವಸ್ಥಾಪಕರು ಸೌಲಭ್ಯ ನೀಡಬೇಕಾದ ಫಲಾನುಭವಿಗಳಿಗೆ ದಿನಾಲು ಕಛೇರಿಗೆ ಅಲೆದಾಡಿಸುತ್ತಿರುತ್ತಾರೆ ಹಾಗೂ ಲಂಚದ ಬೇಡಿಕೆ ಇಟ್ಟು ಲಂಚ ನೀಡದೇ ಇರುವ ಫಲಾನುಭವಿಗಳಿಗೆ ಕಡತ ವಿಲೇವಾರಿ ಮಾಡುವುದರಲ್ಲಿ ನಾಳೆ ಬಾ, ಎರಡು ದಿನ ಬಿಟ್ಟು ಬಾ ಎಂದು ಫಲಾನುಭವಿಗಳಿಗೆ ಅಲೆದಾಡಿಸುತ್ತಿರುತ್ತಾರೆ. ಆದ್ದರಿಂದ ಸದರಿಯವರು ಬೇರೆ ಇಲಾಖೆಯವರಾಗಿದ್ದು ಇವರನ್ನು ನಿಗಮದಿಂದ ವರ್ಗಾವಣೆ ಅಥವಾ ಅಮಾನತ್ತುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here