ಚಿಂಚೋಳಿಯಲ್ಲಿ ವಿದ್ಯುತ್ ಅವಘಡಕ್ಕೆ 3 ಸಾವು: ಸಂಸದ ಜಾಧವ್ ದೌಡು

0
283

ಚಿಂಚೋಳಿ: ನಿನ್ನೆ ರಾತ್ರಿ ಗುಡಗು ತುಂಬಿದ ಮೋಡದಿಂದ ಚಿಂಚೋಳಿ ಪಟ್ಟಣದ ಧನಗರ್ ಗಲ್ಲಿಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ದನ-ಕರುಗಳ ತಿನ್ನುವ ಹೊಟ್ಟನ್ನು ಮುಚ್ಚಲೂ ಹೋಗಿ ಮಳೆ ಗಾಳಿಯಿಂದ ಆ ಹೊಟ್ಟಿನ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಝರಣಮ್ಮ 45, ಮಹೇಶ 22, ಮತ್ತು ಸುರೇಶ 20 ಮೂವರು ವಿಧಿ ಆಟಕ್ಕೆ ಬಲಿಯಾಗಿದ್ದಾರೆ.

Contact Your\'s Advertisement; 9902492681

ಹಿನ್ನಲೆಯಲ್ಲಿ ಸುದ್ದಿ ತಿಳಿದ ಸಂಸದರಾದ ಡಾ ಉಮೇಶ ಜಾಧವರವರು ಮುಂಜಾನೆ 6-00 ಗಂಟೆಯಿಂದ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿ ಕುಟುಂಬದವರ ಹಾಗೂ ಚಿಂಚೋಳಿ ಧನಗರ ಗಲ್ಲಿಯ ಜನರ ರೋಧನೆ ಕಂಡು ದು:ಖಿತರಾಗಿ ತುಂಬಾ ವ್ಯಥೆ ಪಟ್ಟು ನಿಮ್ಮ ದು:ಖದಲ್ಲಿ ಭಾಗಿಯಾಗಿ ಆ ಭಗವಂತನ ವಿಧಿಯಾಟದಲ್ಲಿ ಯಾರು ದೊಡ್ಡವರಲ್ಲಾ ತಮ್ಮೆಲ್ಲರಿಗೂ ದು:ಖ ಸಹಿಸುವ ಶಕ್ತಿ ನೀಡಲೆಂದು ಸಾಂತ್ವನ ಹೇಳಿ ದೇವರಲ್ಲಿ ಪ್ರಾರ್ಥಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಸಂತೋಷ ಪಾಟೀಲ ಹಾಗೂ ಪಿಎಸೈ ಮಹಿಬೂಬ ಪಟೇಲ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಸರ್ಕಾರದ ವತಿಯಿಂದ ಸೌಲಭ್ಯ ಶೀಘ್ರ ಕಲ್ಪಿಸಿ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here