ಪ್ರಭಾಕರ ಜೋಶಿ ಅವರ ಕಾರ್ಯಕುಸುಮ ಶ್ಲಾಘನೀಯ

0
64

ಸೇಡಂ: ಪ್ರಭಾಕರ ಜೋಶಿ ಅವರು ತಮ್ಮ ಜೀವನದುದ್ದಕ್ಕೂ ಬಂದ ಸಮಸ್ಯೆಗಳನ್ನೇ ಮೆಟ್ಟಿಲನ್ನಾಗಿ ಸ್ವೀಕರಿಸಿ ಸಮಾಜಕ್ಕೆ ಸುಗಂದದ ಪರಿಮಳವನ್ನು ಕೊಟ್ಟಿದ್ದಾರೆ. ಅವರು ಜೀವನದಲ್ಲಿ ಬಹುತ್ವ ಪ್ರತಿಭೆಯ ಮೂಲಕ ಸಮಾಜಕ್ಕೆ ಸಲ್ಲಿಸಿದ ಕೊಡುಗೆ ಹಿರಿದಾಗಿದೆ ಎಂದು ಸಾಹಿತಿ ಮತ್ತು ಪತ್ರಕರ್ತ-ಸಾಹಿತಿ ಡಾ.‌ ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕವಿ ಕೆರಳ್ಳಿ ಗುರುನಾಥರೆಡ್ಡಿ ಅವರ 26ನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಲಾಗಿದ್ದ ಸಾಹಿತಿ ಮತ್ತು ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರ ಬದುಕು-ಬರಹದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

‘ಕನ್ನಡ ನಾಡಿನ ತೆಲುಗು ಪ್ರಭಾವದ ಗ್ರಾಮದಲ್ಲಿ ಜನಿಸಿದ ಪ್ರಭಾಕರ ಜೋಶಿ ಅವರ ಪ್ರತಿಭೆ ಅರಳಲು ಸುತ್ತಲಿನ ಪರಿಸರವೇ ಕಾರಣ. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿಯಲ್ಲಿ ತೊಡಗಿಸಿಕೊಂಡು, ಮಹತ್ತರವಾದಂತಹ ಕಾರ್ಯವನ್ನು ಮಾಡಿದ್ದಾರೆ. ಹಲವು ಕ್ಷೇತ್ರದಲ್ಲಿ ಅವರ ಕಾರ್ಯ ವ್ಯಾಪ್ತಿ ಪಸರಿಸಿದ್ದು, ಅವರು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ’ ಎಂದರು.

‘ಚಲನಚಿತ್ರ ಸೆನ್ಸಾರ್ ಮಂಡಳಿ ಸದಸ್ಯೆ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ಬಾಲ್ಯದಿಂದಲೇ ರಂಗಭೂಮಿಯಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಪ್ರಭಾಕರ ಜೋಶಿ ಅವರು, ಕಲಬುರಗಿ ರಂಗಾಯಣಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟಿದ್ದಾರೆ. ಅವರ ರಂಗಚಟುವಟಿಕೆಗಳು ಹಳ್ಳಿಯಿಂದ ದೆಲ್ಲಿವರೆಗೆ ಪಸರಿಸಿವೆ. ಕಲಬುರಗಿ ರಂಗಾಯಣಕ್ಕೆ ವಿಶೇಷ ರಂಗಕಳೆಯನ್ನು ತಂದುಕೊಟ್ಟಂತಹ ಕೀರ್ತಿ ಪ್ರಭಾಕರ ಜೋಶಿ ಅವರಿಗೆ ಸಲ್ಲುತ್ತವೆ. ಅವರ ವಿಚಾರಗಳು ಸುಂಸ್ಕೃತ ಸಮಾಜ ನಿರ್ಮಿಸುವ ಪರಿಕಲ್ಪನೆಯಾಗಿವೆ ಎಂದು ತಿಳಿಸಿದರು.

ಪ್ರಭಾಕರ ಜೋಶಿ ಅವರ ಸಾಹಿತ್ಯದ ಕುರಿತು ಮಾತನಾಡಿದ ಸಾಹಿತಿ ಸಂಧ್ಯಾ ಹೊನಗುಂಟಿಕರ್, ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪ್ರಭಾಕರ ಜೋಶಿ ಅವರ ಬರಹ ಸಾಹಿತ್ಯ ಸೇಡಂ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದೆ. ವಿಭಿನ್ನ ಆಲೋಚನೆಯ ಕಾದಂಬರಿಯನ್ನು ಬರೆದದ್ದು ಬಹುಹಿರಿದಾಗಿದೆ’ ಎಂದು ಉಲ್ಲೇಖಿಸಿದರು.

ಪತ್ರಕರ್ತ ಶೇಷಮೂರ್ತಿ ಅವಧಾನಿ ಮಾತನಾಡಿ, ಪ್ರಭಾಕರ ಜೋಶಿ ಅವರು ವಾಹಿನಿ ವಾರ್ತೆ ಪತ್ರಿಕೆಯನ್ನು ಪ್ರಾರಂಭಿಸಿ ಸೇಡಂ ಪತ್ರಿಕೋದ್ಯಮಕ್ಕೆ ಕೊಡುಗೆ ನೀಡುವುದಲ್ಲದೆ, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಮೂಲಕ ಪತ್ರಕರ್ತ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ತಮಗೆ ಸಿಕ್ಕ ಜವಾಬ್ದಾರಿಗಳನ್ನು ಕಾಲಕಾಲಕ್ಕೆ ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದರು.

ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಟಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಜೋಶಿ ವೇದಿಕೆಯಲ್ಲಿದ್ದರು. ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ, ಆದಿತ್ಯ ಜೋಶಿ, ವಿಜಯಭಾಸ್ಕರ ಮುನ್ನೂರ, ವಿಜಯಕುಮಾರ ಆಡಕಿ, ಶ್ರೀಧರ ಗಡಾಳೆ, ವಿಜಯಕುಮಾರ ಆಡಕಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಎಂ.ಜಿ ದೇಶಪಾಂಡೆ, ಜಗದೀಶ ಕಡಬಗಾಂವ, ಲಿಂಗಾರೆಡ್ಡಿ ಶೇರಿ, ವಾಸುದೇವ ಅಗ್ನಿಹೋತ್ರಿ ಇದ್ದರು. ಅವಿನಾಶ ಬೋರಂಚಿ ನಿರೂಪಿಸಿದರು. ಸಂತೋಷಕುಮಾರ ತೊಟ್ನಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here