ಅಲ್ಲಮ ಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯ -ನರೋಣಿ

0
82

ಶಹಾಬಾದ:ಅ ಲ್ಲಮ ಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯ.ಸಾಧನೆಯ ದೃಷ್ಟಿಯಿಂದ ದೇಶ, ಕಾಲಗಳನ್ನು ಮೀರಿ ವಿಶ್ವದ ಮಹಾನ್ ವಿಭೂತಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನುಭವಿ ಎಂದು ಉಪನ್ಯಾಸಕ ರವೀಂದ್ರ ನರೋಣಿ ಮರತೂರ ಹೇಳಿದರು.

ಅವರು ಬುಧವಾರ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಆಯೋಜಿಸಲಾದ ಅಲ್ಲಮಪ್ರಭು ಜಯಂತಿ ಹಾಗೂ ಯುಗಾದಿ ಹಬ್ಬದ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರದು ಭಕ್ತಿಮಾರ್ಗ.ಅಲ್ಲಮನದು ಅರಿವಿನ ಮಾರ್ಗ.ಅನುಭಾವದರಿವಿನಲ್ಲಿ ಲೋಕಕಲ್ಯಾಣವನ್ನು ಕಂಡವರು ಅಲ್ಲಮ ಪ್ರಭುದೇವರು.ತಮ್ಮ ಆತ್ಮ ಉದ್ಧಾರದ ಜತೆಗೆ ವ್ಯಕ್ತಿ ಶುದ್ಧಿಯ ಮೂಲಕ ಸಮಾಜದ ಶುದ್ಧಿಗೆ ತೊಡಗಿದ ಅವರು ತನು,ಮನ ಶಿದ್ಧಿಗೆ ಆದ್ಯತೆ ನೀಡಿದವರು.ಸರ್ವಸಮಾನತೆಯ, ಸ್ವಾವಲಂಬನೆಯ ಬದುಕಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಜಾರಿಗೊಳಿಸಿದರು. ಬಸವ ಧರ್ಮ ಅಪ್ಪಿಕೊಳ್ಳುವ ಹಾಗೂ ಒಪ್ಪಿಕೊಳ್ಳುವ ಧರ್ಮವಾಗಿದ್ದು, ಅದರ ಸಾರವನ್ನು ನಾವೆಲ್ಲರೂ ಅನುಭವಿಸಿದ್ದೆ ಆದರೆ ಎಲ್ಲರೂ ಬದುಕಿನಲ್ಲಿ ಸಂತೋಷವನ್ನು ಕಾಣಬಹುದು ಎಂದರು.

ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಲಮ ಪ್ರಭುದೇವರ ಆಧ್ಯಾತ್ಮಿಕ ಜ್ಞಾನ,ಅನುಭಾವ, ವೈರಾಗ್ಯ ಜೀವನ ಮನುಕುಲಕ್ಕೆ ಆದರ್ಶವಾಗಿವೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ.ಇಂದಿನಿಂದ ವಸಂತ ಮಾಸ ಪ್ರಾರಂಭವಾಗುತ್ತದೆ. ಬೇವು-ಬೆಲ್ಲ ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಗಿಡ ಮರಗಳು ಹೊಸ ಚಿಗುರು ಪಡೆಯಲು ಪ್ರಾರಂಭವಾಗುತ್ತದೆ. ಈ ಹೊಸ ವರ್ಷವನ್ನು ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನದಲ್ಲಿ ಸಿಹಿ-ಕಹಿ ಎರಡೂ ಸಮಾನವಾಗಿರುವುದರ ಸಂಕೇತವಾಗಿ ಸ್ವೀಕರಿಸಬೇಕೆಂಬ ಸಂದೇಶವೇ ಈ ಯುಗಾದಿ ಎಂದರು.

ದಾನಿಗಳಾದ ಈರಣ್ಣ ಸುತಾರ, ಮರತೂರಿನ ಶಾಮರಾಯಗೌಡ ಮಾಲಿಪಾಟೀಲ ವೇದಿಕೆಯ ಮೇಲಿದ್ದರು. ರೇವಣಸಿದ್ದಪ್ಪ ಮುಸ್ತಾರಿ ನಿರೂಪಿಸಿ, ಸ್ವಾಗತಿಸಿದರು, ವಂದಿಸಿದರು. ಬಸವ ಸಮಿತಿ ಮಾಜಿ ಅಧ್ಯಕ್ಷ ಅಮೃತ ಮಾನಕರ್, ಪದಾಧಿಕಾರಿಗಳಾದ ಶಿವಶರಣಪ್ಪ ಜಟ್ಟೂರ್, ಚಂದ್ರಕಾಂತ ಅಲಮಾ, ಶಾಂತಪ್ಪ ಬಸಪಟ್ಟಣ, ಹಣಮಂತರಾಯ ದೇಸಾಯಿ, ಶಿವರಾಜ ಹಡಪದ, ಮಲ್ಲಿಕಾರ್ಜುನ ಘಾಲಿ, ಅಮರಪ್ಪ ಹೀರಾಳ,ಶರಣಬಸಪ್ಪ ನಾಗನಳ್ಳಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here