ಕಲಬುರಗಿ; ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್ ನ್ಯಾಯವಾದಿ ಜಯಾನಂದಯ್ಯ ಎನ್. ಸ್ವಾಮಿ ಅವರು ಮಂಗಳವಾರ ಚುನಾವಣಾ ಅಧಿಕಾರಿ ಹನುಮಂತ ಎನ್.ಭಾವಿಕಟ್ಟಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್.ಎಸ್.ನರೋಣಿ, ಅಶೋಕಕುಮಾರ ಕಮಲಾಪೂರಕರ್, ಎಮ್.ಜಿ.ಪಾಟೀಲ, ಮಲ್ಲಿಕಾರ್ಜುನ ಕೋಟೆ, ಕೆ.ಎನ್.ತಿಮ್ಮಾಪೂರಿ, ಮಲ್ಲಿಕಾರ್ಜುನ ಹಿರೋಳ್ಳಿ, ಪಿ.ಎಸ್.ಮಠ, ಅಣವೀರ ಹಂಡಿ, ಭೀಮರಾವ ಉಂಪಳೆ, ಬಾಬುರಾವ ಬಿ.ಪಾಟೀಲ, ಸುರೇಖಾ ಪಾಟೀಲ, ಸಂಗೀತಾ ಸ್ವಾಮಿ, ಅಂಬಾರಾಯ ಕಾಶಿ, ದೇವರಾಜ ಹಮೀಲಪುರಕರ್, ಪ್ರಭು ಹೋಸಮನಿ ಇದ್ದರು.