ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ವಾರ್ಡ್ ನಂ.46.ರ ಹನುಮಾನ ನಗರ ತಾಂಡದ ಮುಖಂಡರಾದ ಅರ್ಜುನ ಕಾಶಿನಾಥ, ಶ್ರೀನಿವಾಸ ಪವಾರ, ಜಿಯಾ ವಾಲು, ಸುಭಾಷ ಆಟೋ, ಚಂದು ಆಟೋ, ರಾಜು, ರಾಮು, ಸಂಜಯ ಶಿವಾಜಿ, ಚಂದ್ರಪಾಲ, ರಾಜು ಶ್ಯಾಮು, ಹರಿಶಚಂದ್ರ ರಾಮು, ಕಾಂತು ಬಾಬು, ವಿಜಯ ರಾಮು, ಪ್ರಕಾಶ ಬಿದ್ದು, ಜಯಂತ ರಾಠೋಡ, ಸಾಗರ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ವೀರನಾಯಕ, ಕಾಂಗ್ರೆಸ್ ಮುಖಂಡರಾದ ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ನಾಗರಾಜ ಗುಂಡಗುರ್ತಿ, ಸಂಜಯ ಮಾಕಲ್, ಪರಶುರಾಮ ನಾಟೀಕಾರ ಸೇರಿದಂತೆ ಇತರರು ಇದ್ದರು.