ಆಳಂದ: ಪಟ್ಟಣದಿಂದ ಪ್ರತಿನಿತ್ಯ ಮಧ್ಯಾಹ್ನ ಜಿಲ್ಲಾ ಕೇಂದ್ರ ಕಲಬುರಗಿಗೆ ತೆರಳಲು ಹೊರಡುವ ಪ್ರಯಾಣಿಕರಿಗೆ ಸಕಾಲಕ್ಕ್ಕೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ಇಲ್ಲದಕ್ಕೆ ನಿತ್ಯ ನೂರಾರು ಪ್ರಯಾಣಿಕರ ಪರದಾಟ ಎಂದಿನಂತೆ ಮುಂದುವರೆದಿದೆ.
ಈ ನಡುವೆ ಖಾಸಗಿ ಕ್ರೋಸ್ರಗಳಿದ್ದರು ಸಹ ಸಾಕಾಗುತ್ತಿಲ್ಲ. 5:00ಗಂಟೆಯಿಂದ ರಾತ್ರಿ 8:00ಗಂಟೆಯವರೆಗೆ ಸಾರಿಗೆ ಸಂಚಾರ ಬಸ್ಗಳು ಪ್ರಯಾಣಿಕರ ಲೆಕ್ಕದಲ್ಲಿ ಸಾಕಾಗುತ್ತಿಲ್ಲ. ಸಾರಿಗೆ ಸಂಸ್ಥೆಯ ಲೆಕ್ಕದಲ್ಲಿರುವ ಬಸ್ ಸಂಚಾರದಿಂದ ಕೆಲವು ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ಸಿಕ್ಕರೆ ಇನ್ನೂಳಿದವರಿಗೆ ಗಂಟೆಗಂಟಲೆ ನಿತ್ತುಕೊಂಡು ಪ್ರಯಾಣಿಸುವಂತಾಗಿದೆ.
ಇದು ಹಲವಾರು ವರ್ಷಗಳಿಂದ ಸಮಸ್ಯೆ ಪ್ರಯಾಣಿಕರಿಗೆ ಎದುರಾಗಿದ್ದರು ಸಹ ಇಲ್ಲಿನ ಜನ ಪ್ರತಿನಿಧಿಗಳಾಗಲ್ಲಿ ಸಾರಿಗೆ ಸಂಸ್ಥೆಯ ಸಂಬಂಧಿತ ಅಧಿಕಾರಿಗಳಾಗಲಿ ಗಮನ ಹರಿ¸ದೇ ಇರುವುದು ಪ್ರಯಾಣಿಕರ ಸಂಕಷ್ಟಕ್ಕೆ ಕೊನೆಯಿಲ್ಲದಂತಾಗಿದೆ.
ಸಮಯಕ್ಕೆ ಪ್ರಯಾಣಿಕರ ಅನುಗುಣವಾಗಿ ಬಸ್ ಸಂಚಾರ ಕೈಗೊಳ್ಳದೆ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಜೀವ ಭಯದಲ್ಲೇ ಖಾಸಗಿ ವಾಹನಗಳಲ್ಲಿ ಅನಿವಾರ್ಯವಾಗಿ ಪ್ರಯಾಣಿಸುವಂತ ಪರಿಸ್ಥಿತಿ ನೋಡತಿರದ್ದಾಗಿದೆ.
ಒಂದಡೆ ಸಾರಿಗೆ ಇಲಾಖೆಗೆ ಬರುವ ಆರ್ಥಿಕ ನಷ್ಟವಾದರೆ ಮತ್ತೊಂದಡೆ ಪ್ರಯಾಣಿಕರಿಗೆ ಸಮಯಕ್ಕೆ ಬಸ್ ಪ್ರಯಾಣ ದೊರೆಯದೇ ಇರುವ ಪರಿಸ್ಥೀತಿಯನ್ನು ಈಗಲಾದರು ಸಂಬಂಧಿ ಅಧಿಕಾರಿಗಳು ಕ್ರಮ ಕೈಗೊಳ್ಳುವರೆ ಎಂಬುದು ಪ್ರಯಾಣಿಕರು ಕಾದು ಕುಳಿತ್ತಿದ್ದಾರೆ.