ಆಳಂದ : ಗುಲಬರ್ಗಾ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ವ್ಯಾಪ್ತಿಯಲ್ಲಿಬರುವ ಆಳಂದ ಪಟ್ಟಣದ ಉಪ ವಿಭಾಗದ ಕಚೇರಿಯಲ್ಲಿ ಶನಿವಾರ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ನಡೆಯಿತು.
ವಿವಿಧ ಗ್ರಾಮ,ಪಟ್ಟಣಗಳಿಂದ ಗ್ರಾಹಕರು ಪಾಲ್ಗೊಂಡು,ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ತಂದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಟರಾಜ, ಶಾಖಾಧಿಕಾರಿ ರುದ್ರೇಶ,ಜ್ಞಾನೇಶ್ವರ ಸೇರಿದಂತೆ ಹಲವು ಅಧಿಕಾರಿಗಳು,ರೈತರು ಸಿಬ್ಬಂದಿ ಪಾಲ್ಗೊಂಡಿದ್ದರು.