ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರಲ್ಲಿ ಅಖಿಲ ಕರ್ನಾಟಕ ಮಹಾ ಮಂಡಳಿ ಅಸೋಸಿಯೇಷನ್ ಕಲಬುರಗಿ ಘಟಕ-2ರಲ್ಲಿ ಇತ್ತೀಚೆಗೆ ರಾಜ್ಯ ಘಟಕದ ವತಿಯಿಂದ ಕಲಬುರಗಿ ವಿಭಾಗ-2ರ ಅಧ್ಯಕ್ಷರಾದ ಭರತ ಪಿ.ಶ್ರೀಗೇರಿ, ಪ್ರಧಾನ ಕಾರ್ಯದರ್ಶಿ ಸಂಗನಬಸಪ್ಪಾ ಅಂಗಡಿ, ಕಾರ್ಯದ್ಯಕ್ಷರಾದ ಶಿವಶರಣಪ್ಪ ಡಬರಾಬಾದಿ ಹಾಗೂ ನೂತವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಣ ನಾಯಿಕೋಡಿ, ಮುಖಂಡರಾದ ಅಜಯಕುಮಾರ ಕಪನೂರ, ಗುಂಡಪ್ಪಾ ವಾಡಿ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರೇವಣಸಿದ್ದ ಖರ್ಚನ್, ಗೌರವಾಧ್ಯಕ್ಷರಾಗಿ ಭೀಮಸೇನ ಪಾಟೀಲ, ಪ್ರಧಾನ ಕಾರ್ಯದರ್ಶಿ ಬಸವರಾಜ ಮಸರೇ, ಕಾರ್ಯಾಧ್ಯಕ್ಷರಾಗಿ ಆಕಾಶ ಕುಂದನ್, ಖಜಾಂಚಿಯಾಗಿ ಶರಣು, ಜಂಟಿ ಕಾರ್ಯದರ್ಶಿಯಾಗಿ ಗೌತಮ, ಪ್ರಚಾರ ಕಾರ್ಯದರ್ಶಿ, ಮಲ್ಲು ಧಂಗಾಪೂರ, ಸಂಘಟನೆ ಕಾರ್ಯದರ್ಶಿ ಭೀಮಣ್ಣ ಪೂಜಾರಿ, ಉಪಾಧ್ಯಕ್ಷರಾಗಿ ಮಹಾಂತಗೌಡ, ಮಹಿಬೂಬ ಪಟೇಲ, ಶಂಕ್ರಪ್ಪಾ ತಳವಾರ ಅವರನ್ನು ಸರ್ವಾನು ಮತದಿಂದ ಆಯ್ಕೆಮಾಡಲಾಯಿತು.