ಕಲಬುರಗಿ: ಶ್ರೀಮತಿ ವೀರಮ್ಮ ಗಂಗಸಿರಿ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಸಂಸ್ಥಾ ಪಕ ಪ್ರಾಶುಂಪಾಲರಾದ ಪೆÇ್ರ. ವಿಜಯಲಕ್ಷ್ಮಿ ಗುರುಸಿದ್ದಯ್ಯ ಅವರು ರಚಿಸಿರುವ “ರ್ರ್ಯಾಡ್ಂ ಥಾಟ್ಸ್” ಎಂಬ ಪುಸ್ತಕವನ್ನು ಡಾ.ಶೀಲಾ ಸಿದ್ರಾಮ ಅವರು ಬಿಡುಗಡೆಗೊಳಿಸಿದರು.
ಪೆÇ್ರ. . ವಿಜಯಲಕ್ಷ್ಮಿ ಗುರುಸಿದ್ದಯ್ಯ ಅವರ ಶಿಷ್ಯೆ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ.ಇಂದಿರಾ ಶೇಟಕಾರ ಅವರು ಪುಸ್ತಕ ದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಕುಮಾರಿ. ಸಾಕ್ಷಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಇವರಿಗೆ ಹಾರ್ಮೋನಿಯಂ ಸಾಥ ಡಾ. ರೇಣುಕಾ ಹಾಗರಗುಂಡಗಿ ತಬಲಾ ಸಾಥ್ ಡಾ. ಮುಖಿಂ ಮಿಯಾ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಡಾ. ಚಂದ್ರಕಲಾ ಪಾಟೀಲ್ ಅವರು ಸ್ವಾಗತಿಸಿದರು. ಡಾ. ಮಹೇಶ ಗಂವ್ಹಾರ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರೂಪಿಸಿದರು. ಶ್ರೀಮತಿ ಉಮಾ ರೇವೂರ್ ಅವರು ವಂದಿಸಿದರು.
ವೇದಿಕೆಯ ಮೇಲೆ ಉಪ ಪ್ರಾಚಾರ್ಯರುಗಳಾದ ಡಾ. ವೀಣಾ ಎಚ್ ಮತ್ತು ಉಮಾ ರೇವೂರ ಮತ್ತು ಪೆÇ್ರ. ವಿಜಯಲಕ್ಷ್ಮಿ ಗುರುಸಿದ್ದಯ್ಯ ಅವರ ಮೊಮ್ಮಗಳಾದ ಡಾ. ಅಂಕಿತಾ, ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಥಿನಿಯರು ಪಾಲ್ಗೊಂಡಿದ್ದರು.