ಕಲಬುರಗಿ: ನಗರದ ಜಗತ್ ಗೋಮುಖ ರಾಯರ ಮಠದಲ್ಲಿ ಗುರುರಾಜ್ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ವಿಷ್ಣುಸಹಸ್ರನಾಮ, ರಾಯರ ಅಷ್ಟೋತ್ತರ, ಮಧ್ಯಾರಾಧನೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಜ್ಞಾನ ಪೂರ್ಣ ಪ್ರತಿಷ್ಟಾನ ಸಂಸ್ಥಾಪಕರಾದ ಸೀತಾ ಮಲ್ಲಾಬದಿ, ಸಮಾಜ ಸೇವಕರು, ಹಿಂದೂ ಕಾರ್ಯಕರ್ತೆ ಕುಮಾರಿ ಪೂರ್ಣಿಮಾ ಬಾರಿಮನಿ ಮತ್ತು ಕಾವ್ಯ ಮುಂಡರಗಿ ಇವರನ್ನುಸತ್ಕರಿಸಲಾಯಿತು.
ಪಂಡಿತ್ ಗೋಪಾಲಚಾರ್ಯ ಅಕಮಂಚಿ ಅವರಿಂದ ರಾಯರ ಮಹಿಮೆ ಕುರಿತು ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಗುರುರಾಜ್ ಸೇವಾ ಸಮಿತಿಯ ಅಧ್ಯಕ ಅನಿಲ್ ಬಡದಲ್, ನರಹರಿ ಪಾಟೀಲ್, ಪವನ್ ಫಿರೋಜಾಬಾದ್, ನಾರಾಯಣಾರ್ಚಾ, ಪ್ರಾಣೇಶ್ ಭುರ್ಲಿ, ಗಿರೀಶ್ ರಂಜೊಳ್ಕರ್, ರಾಜೇಶ್ ಹನುಮ ಸಾಗರ, ಭೀಮಸೆನ್ ರಾವ್, ಶಂಕರ್ ರಾವ್, ಶಶಿಕಾಂತ್ ಸಾಗನೂರ್, ನೀಲಲೋಹಿತ ಜೇವರ್ಗಿ, ಹಣಮಂತ ರಾವ್ ಜೇವರ್ಗಿ, ರಾಘವೇಂದ್ರ ರಾವ್, ಜೇವರ್ಗಿ, ವಿನೋದ್ ದೇಸಾಯಿ, ಪ್ರಮೋದ್ ದೇಸಾಯಿ, ಉದಯ್ ಪಾಟೀಲ್, ಸಂಜು ಕುಲಕರ್ಣಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.