ಕಲಬುರಗಿ: ಬಂಜಾರ (ಲಂಬಾಣಿ) ಸಮಾಜದ ಸಂಘಟನೆಯಾದ ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಸಂದೇಶ ಆರ್ ಚವ್ಹಾಣ ಹಾಗೂ ಕರ್ನಾಟಕದ ರಾಜ್ಯಾಧ್ಯಕ್ಷ ಬಾಳಾಸಾಹೇಬ ನೇತೃತ್ವದಲ್ಲಿ ಗೋರ್ ಸೇನಾ ರಾಷ್ಟ್ರೀಯ ಸಂಘಟನೆಯ ಜಿಲ್ಲಾ ಅಧ್ಯಕ್ಷರನ್ನಾಗಿ ಮಾನಸಿಂಗ್ ಆರ್ ಚವ್ಹಾಣ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ವಕ್ತಾರ ನೇಹರು ಜಾಟೋತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಚವ್ಹಾಣ, ರಾಜ್ಯ ಉಪಾಧ್ಯಕ್ಷ ರವಿ ಕಾರಭಾರಿ, ಸೀತಾರಾಮ ರಾಣೋಸೋತ ಉಪಸ್ಥಿತರಿದ್ದರು.