ಪ್ರಮೋದ ಮಧ್ವರಾಜ್‍ಗೆ ಲೋಕಸಭೆ ಟಿಕೆಟ್ ನೀಡಿ

0
56

ಕಲಬುರಗಿ: ಕೋಲಿ, ಕಬ್ಬಲಿಗ, ಗಂಗಾಮತ, ಬೆಸ್ತ, ಮೊಗವೀರ, ಅಂಬಿಗ, ಮೀನುಗಾರರ ಸಮುದಾಯಕ್ಕೆ ಸೇರಿದ ಪ್ರಮೋದ ಮಧ್ವರಾಜ್ ಅವರಿಗೆ ಬಿಜೆಪಿ ವತಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಕರ್ನಾಟಡಕ ರಾಜ್ಯ ಕೋಲಿ ಕಬ್ಬಲಿಗ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ್ ಆಗ್ರಹಿಸಿದರು.

ರಾಜ್ಯದಲ್ಲಿ 39 ಪರ್ಯಾಯ ಪದಗಳಿಂದ ಕರೆಯಲಾಗುವ ಕೋಲಿ ಕಬ್ಬಲಿಗ ಸಮುದಾಯವು ಸುಮಾರು 60 ಲಕ್ಷದಷ್ಟಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 2,30,000 ಜನಸಂಖ್ಯೆಯ ನಿರ್ಣಾಯಕ ಮತದಾರರಿದ್ದು, ಮಧ್ವರಾಜ್ ಅವರಿಗೆ ಟಿಕೆಟ್ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಪ್ರಮೋದ ಮಧ್ವರಾಜ್ ಅವರು ಓರ್ವ ಪ್ರಾಮಾಣಿಕ ಹಾಗೂ ಶುದ್ಧಹÀಸ್ತದ ರಾಜಕಾರಣಿಯಾಗಿದ್ದು, ಅವರಿಗೆ ಟಿಕೆಟ್ ನೀಡುವ ಮೂಲಕ ಕೋಲಿ ಕಬ್ಬಲಿಗ ಸಮುದಾಯಕ್ಕೆ ರಾಜ್ಯಕೀಯದಲ್ಲಿ ಹಾಗೂ ಪಕ್ಷದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ತಿಳಿಸಿದರು.

ಭೀಮರಾಯ ಐನಾಪುರ, ಚಂದ್ರಶಾ ಜಮಾದಾರ, ಸೀತಾರಾಮ ಜಮಾದಾರ, ದತ್ತಾತ್ರೇಯ ಜಮಾದಾರ, ಮಹಾರಾಯ ಅಗಸಿ, ಶರಣಪ್ಪ ನಾಟೀಕಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here