ಕಲಬುರಗಿ: ಆಹಾರ, ಆರೋಗ್ಯ, ಶಿಕ್ಷಣ ಉಳಿಸಿ, ದೇಶವನ್ನು ಅಭಿವೃದ್ಧಿ ಪಡಿಸಿ ಮತ್ತು ಸಮಾನ ವೇತನ ನಿಗದಿಪಡಿಸಿ ಶ್ರಮಿಕರ ಬದುಕನ್ನು ಉಳಿಸಿ ಎಂದು ಆಗ್ರಹಿಸಿ ಸ್ತ್ರೀಂ ನೌಕರರ ಸಂಘಟನೆಗಳು ಮತ್ತು ಸಿಐಟಿಯು ಜ.23 ರಂದು ಸಂಸದರ ಕಚೇರಿ ಚಲೋ ಆಂದೋಲನ ಆಯೋಜಿಸಿದ್ದು, ಇದರ ಅಂಗವಾಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರಚಾರ ಜಾಥಾ ನಡೆಸಲಾಯಿತು. ಎಂ.ಬಿ ಸಜ್ಜನ, ಗೌರಮ್ಮ ಪಾಟೀಲ,ಮಹಾದೇವಮ್ಮ,ಮಂಜುಳಾ,ರತ್ನಾ ಸೇರಿದಂತೆ ಹಲವರಿದ್ದರು.