ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ಪಟ್ಟಣದಲ್ಲಿರುವ ಎಲ್ಲ ಅಂಗಡಿ ಮುಂಗಟುಗಳ ನಾಮ ಫಲಕ ಕನ್ನಡದಲ್ಲಿ ಕಡ್ಡಾಯವಾಗಿ ಬರೆಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಶೀಲ್ ಕಚೇರಿ ಎದರುಗಡೆ ಇಂದು ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಸೈಯದ್ ಶಾಹವಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಈಶ್ವರಮ್ಮ ಯಾಧವ, ಉಪಾಧ್ಯಕ್ಷ ಭಾಸ್ಕರ್ ಕರಿಚಕ್ರ, ಸಾಬಣ್ಣ ಲಾಡ್ಲಾಪುರಕರ್, ರವಿ, ಶೇರ ಅಲಿ, ಗಣೇಶ ರಾಠೋಡ, ಶರಣು ಭಾಗೋಡಿ, ಮೋನಪ್ಪ, ಅಫಸರ್, ತಿರುಪತಿ, ನಂದಾ ರಾಠೋಡ, ಅನೀಲ್ ಚವ್ಹಾಣ, ಆನಂದ ಸೇರಿದಂತೆ ಇತರರು ಇದ್ದರು.