ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನವ ಮತದಾರರ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇರ ಪ್ರಸಾರದ ಭಾಷಣವನ್ನು ಬಿಜೆಪಿ ಮುಖಂಡರಿಂದ ವೀಕ್ಷಿಸಲಾಯಿತು.
ಈ ವೇಳೆ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ಸುಮಾರು ಒಂದು ದಶಕದ ಅವಧಿಯಲ್ಲಿ ಭಾರತದ ಆರ್ಥಿಕತೆಯನ್ನು ನಿರ್ದಿಷ್ಟ ರೀತಿಯಲ್ಲಿ ಮೋದಿ ಜಿ ಸರಕಾರವು ಬದಲಾಯಿಸಿದೆ. 9 ವರ್ಷಗಳ ಮೋದಿ ಜಿ ಸರಕಾರದದ ಅವಧಿಯಲ್ಲಿ ಸರಕಾರದ ನೀತಿಗಳು ದೇಶದ ಆರ್ಥಿಕತೆಯ ಮೇಲೆ ಆಳವಾದ ಮತ್ತು ಶಾಶ್ವತವಾದ ಪರಿಣಾಮಗಳನ್ನು ಬೀರಿರುವ ಅಂಶಗಳು, ದೇಶದ ಬಹು ಸಂಖ್ಯಾತ ಹಿಂದೂಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣ ಇಂತಹ ಹಲವು ಪರಿಣಾಮಕಾರಿ ವಿಷಯಗಳು ನಮ್ಮ ಹೊಸ ಯುವ ಮತದಾರರಿಗೆ ತಿಳಿಸಬೇಕಾಗಿದೆ ಎಂದರು.
ತಾಲ್ಲೂಕ ಯುವ ಮೂರ್ಚಾ ಅಧ್ಯಕ್ಷ ದೇವರಾಜ ಬೆಣ್ಣೂರ ಮಾತನಾಡಿ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಒಂದು ಕೋಟಿ ಯುವಕರನ್ನು ತಲುಪುವ ಸಲುವಾಗಿ ಬಿಜೆಪಿ ಯುವ ಮೋರ್ಚಾ ಅಭಿಯಾನ ಆರಂಭಿಸಿದೆ. ದೇಶದ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ 2,000 ಮಂದಿ ಹೊಸ ಮತದಾರರನ್ನು ಸಂಪರ್ಕಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ ಅದಕ್ಕಾಗಿ ಪಕ್ಷದವರೆಲ್ಲರೂ ಪ್ರತಿ ವಾರ್ಡ್ ನ ಹೊಸ ಯುವ ಮತದಾರರಿಗೆ ಪಕ್ಷ ನೀಡಿದ ಕ್ಯೂಆರ್ ಕೊಡ್ ಗೆ ಸ್ಕಾನ್ ಮಾಡಿ ಅಥವಾ 7820078200 ನಂಬರ್ ಗೆ ಮಿಸ್ ಕಾಲ ಕೊಡುವುದರ ಮುಖಾಂತರ ನೊಂದಣಿ ಮಾಡಿಸಬೇಕು ಎಂದು ಹೇಳಿದರು.
ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು. ವಾಡಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ,ಅರ್ಜುನ ಕಾಳೆಕರ,ಶಿವಶಂಕರ ಕಾಶೆಟ್ಟಿ, ಕಿಶನ ಜಾಧವ,ಪ್ರಕಾಶ ಪುಜಾರಿ
ಬಸವರಾಜ ಕಿರಣಗಿ, ಮಲ್ಲಿಕಾರ್ಜುನ ಸಾತಖೇಡ, ಸತೀಶ ಸಾವಳಗಿ, ಅರ್ಜುನ ದಹಿಹಂಡೆ,ದೇವೇಂದ್ರ ಬಡಿಗೇರ,ಅಯ್ಯಣ್ಣ ದಂಡೋತಿ, ಆನಂದ ಇಂಗಳಗಿ,ಪ್ರೇಮ ರಾಠೋಡ,ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,
ದೆವಕ್ಕಿ ಪುಜಾರಿ,ಶರಮ್ಮ ಯಾದಗಿರಿ,ಚಂದ್ರಕಾಂತ ಭಂಕೂರ,ಸಾಗರ,ಸಂಜಯ ಕುಮಾರ,ವಿಶ್ವನಾಥ ಕಲ್ಲಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.