ಕಲಬುರಗಿ: ಜಿಲ್ಲೆ ಸೇಡಂ ತಾಲೂಕಿನ ಊಡಗಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕೌಶಲ್ಯ ತರಬೇತಿ ನೀಡುವುದರ ಮೂಲಕ ಅವರನ್ನು ಜಾಗೃತರನ್ನಾಗಿ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರ ಅತ್ಯಾಚಾರ ತಡೆಗಟ್ಟಲು ಆತ್ಮ ರಕ್ಷಣೆ ಕಲೆಯನ್ನು ತಾಲೂಕಿನ 32 ಸರಕಾರಿ ಪ್ರೌಢ ಶಾಲೆಗಳಲ್ಲಿ ನಿರಂತರವಾಗಿ ಕರಾಟೆ ತರಬೇತಿಯನ್ನು ನೀಡಲಿದೆ ಎಂದು ತರಬೇತಿದಾರರಾದ ಬಸವರಾಜ್ ಕಾಳಗಿ ತಿಳಿಸಿದ್ದಾರೆ.
ಈ ಕೌಶಲ್ಯ ತರಬೇತಿಯಿಂದ ವಿದ್ಯಾರ್ಥಿನಿಯರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕರಾಟೆಯನ್ನು ಬೆಳೆಸಬೇಕೆಂದು ಅರ್ಥೈಸಿದರೂ ಕರಾಟೆ ತರಬೇತಿ ನೀಡಿದರು ಸರಕಾರದಿಂದ ಮೂರು ಸಾವಿರ ಗೌರವ ಧನ ನೀಡುವುದರ ಮೂಲಕ ಪೆÇ್ರೀತ್ಸಾಹಿಸಿದೆ. ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಭಾರತೀಯ ದೊಡ್ಡಮನಿ ಸೇರಿದಂತೆ ಶಿಕ್ಷಕ ವೃಂದದವರು, ವಿದ್ಯಾರ್ಥಿನಿಯರು, ತರಬೇತಿದಾರರಿಗೆ ಸನ್ಮಾನಿಸಲಾಯಿತು.