ಚಿತ್ತಾಪುರ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭೋವಿ ವಡ್ಡರ್ ಸಮಾಜದ ಸರಪಂಚರಾದ ವಿಠ್ಠಲ್ ಎಸ್. ಕಟ್ಟಿಮನಿ, ಸುಭಾಷ ಎಸ್. ಕಟ್ಟಿಮನಿ, ಮಹಿಳಾ ಅಧ್ಯಕ್ಷೆ ಶಾಂತಬಾಯಿ ಗಾಯಕವಾಡ ಅವರ ನೇತೃತ್ವದಲ್ಲಿ ಕಾಶಿ ಏರಿಯಾದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವೆಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಶಾಲುಗಳನ್ನು ಹಾಕುವ ಮೂಲಕ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸಾಬಣ್ಣ ಕಾಶಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.