ಸುರಪುರ: ನಗರದ ಶ್ರೀರಾಮ ಮಂದಿರದಲ್ಲಿ ಭಾವಸಾರ ಕ್ಷತ್ರೀಯ ಸಮಾಜ ಸಂಘದ ತಾಲೂಕ ಮಟ್ಟದ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಭಾವಸಾರ ಕ್ಷತ್ರೀಯ ಸಮಾಜ ಹಿಂದುಳಿದ ಸಮಾಜವಾಗಿದ್ದು ನಮ್ಮ ಸಮಾಜದ ಏಳಿಗೆಗಾಗಿ ನಾವೆಲ್ಲರು ಸಂಘಟಿತರಾಗಿ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಿದಾಗ ಸರಕಾರದ ಸೌಲಭ್ಯಗಳು ದೊರೆಯಲು ಸಾಧ್ಯವಿದೆ.ಆದ್ದರಿಂದ ತಾಲೂಕಿನಾದ್ಯಂತ ಇರುವ ನಮ್ಮ ಸಮಾಜದ ಜನರನ್ನು ನೂತನ ತಾಲೂಕ ಘಟಕಕ್ಕೆ ನೇಮಕಗೊಂಡ ಪದಾಧಿಕಾರಿಗಳು ಸಂಘಟಿಸಿ ಸರಕಾರದ ಸೌಲಭ್ಯ ಪಡೆಯಲು ಹೋರಾಟವನ್ನು ರೂಪಿಸುವಂತೆ ತಿಳಿಸಿದರು.ಇದೇ ಸಂದರ್ಭದಲ್ಲಿ ತಾಲೂಕ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಸಭೆಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಮುಖಂಡರಾದ ಮಾರ್ಥಂಡರಾವ್ ಭೀಮಜಿ ಹಂಚಾಟೆ, ಷಣ್ಮುಖರಾವ್ ವಿಠಲ್ರಾವ್ ಪುಲ್ಸೆ,ಕೃಷ್ಣಾಜಿರಾವ್ ನಾರಾಯಣರಾವ್ ಹಂಚಾಟೆ,ಶ್ರೀನಿವಾಸ ಕಟಾರೆ,ಚೆನ್ನಪ್ಪ ವೆಂಕಟೇಶರಾವ್ ಹಂಚಾಟೆ,ದೀಪಕ್ ಬಾಬುರಾವ್ ಇತರರಿದ್ದರು.
ನೂತನ ಪದಾಧಿಕಾರಿಗಳು: ರಾಕೇಶ ತಿಪ್ಪಣ್ಣ ಹಂಚಾಟೆ (ಅಧ್ಯಕ್ಷ),ಅಂಬಾದಾಸ್ ಮಹೇಂದ್ರಕರ್ (ಉಪಾಧ್ಯಕ್ಷ),ಗೋವಿಂದ ಎಮ್.ಮಾಳದಕರ್ (ಪ್ರಧಾನ ಕಾರ್ಯದರ್ಶಿ) ಇವರನ್ನು ನೇಮಕಗೊಳಿಸಲಾಯಿತು.