ಅಳ್ಳೊಳ್ಳಿ ಜ್ಞಾನಜ್ಯೋತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0
124

ಚಿತ್ತಾಪುರ : ತಾಲೂಕಿನ ಅಳ್ಳೊಳ್ಳಿಯ ಜ್ಞಾನಜೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಮಕ್ಕಳು ವಿವಿಧ ನಾಯಕರ ವೇಷ ಧರಿಸಿ ಲೆಜಿನ್ ಕೋಲಾಟ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಯ ಘೋಷದೊಂದಿಗೆ ಸಂಚರಿಸಿ ಶಾಲೆಗೆ ಆಗಮಿಸಿದ್ದರು.
ಶಾಲೆಯಲ್ಲಿ ವಿಶ್ವ ಜನ ಸೇವಾ ಸಂಸ್ಥೆ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರು ಅವರು ಧ್ವಜಾರೋಹಣ ನೆರವೇರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಸ್ವಾಮಿ ತೊಟ್ನಳ್ಳಿ, ಗ್ರಾಮದ ಮುಖಂಡರಾದ ಮಹಾದೇವಪ್ಪ ಡೋಣಗಾಂವ, ಸೋಮಶೇಖರ್ ಮೌಶನಿ, ರಾಜಶೇಖರ್ ಡೋಣಗಾಂವ, ವೀರಭದ್ರಪ್ಪ ಟೆಂಗಳಿ, ಅಯ್ಯಣ್ಣ ಕಂಡಕ್ಟರ್, ರವಿ ಮಡಿ, ರಸುಲ್ ಸಾಬ್, ಅಯ್ಯಣ್ಣ ನಾಚಾವರ, ಶಾಲೆಯ ಮುಖ್ಯ ಗುರು ಬಸವರಾಜ್ ವಟ್ಟಿ, ಶಿಕ್ಷಕರಾದ ಸಲೀಂ ನಾಯಕಲ್, ಶಿಕ್ಷಕಿಯರಾದ ಅನಸೂಯಾ ಮಡಿವಾಳ, ಮಂಜುಳಾ ಸಂದೇರ್, ಮಂಜುಳ ಟೆಂಗಳಿ, ಸಾವಿತ್ರಿ ನಾಚವಾರ, ಶಾಂತಮ್ಮ ಕಾಸನೂರ್, ಶಾಂತಮ್ಮ ವಿಶ್ವಕರ್ಮ ಇದ್ದರು.

ವಿದ್ಯಾರ್ಥಿಗಳಾದ ಆದಿತ್ಯ, ಪ್ರಶಾಂತ್, ಸ್ವಾತಿ, ಸಾನ್ವಿಕಾ, ವರ್ಷ, ಶ್ರೇಯ, ಮಾನಸ, ಆದರ್ಶಣಿ, ಹರ್ಷ, ಭಾಗ್ಯಶ್ರೀ ವಿವಿಧ ನಾಯಕರ ವೇಶ್ಯ ಧರಿಸಿ ಜನಮನ ಸೆಳೆದರು. ಮಹಾನಂದ ಸ್ವಾಗತಿಸಿದರು, ರಾಧ ನಿರೂಪಿಸಿದ್ದರು, ಯಲ್ಲಮ್ಮ ವಂದಿಸಿದರು.

ಎಂ.ಡಿ‌ ಮಶಾಖ ಚಿತ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here