ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು.
ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಜಿಲ್ಲೆ ಮತ್ತು ರಾಜ್ಯದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಡೆಂಗ್ಯೂ/ಮಲೆರಿಯಾ ರೋಗವನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತವು ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ರಮದ ಭಾಗಿಯಾಗಿ ಈ ಚಟುವಟಿಕೆಯನ್ನು ನಡೆಸಲಾಯಿತು. ಅಪಾಟೆರ್ಂಟ್ ಹತ್ತಿರದ ಸಾರ್ವಜನಿಕ ಉದ್ಯಾನವನ ಹಾಗೂ ಅಪಾಟೆರ್ಂಟ್ ಪಾಕಿರ್ಂಗ್ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಪಾಟೆರ್ಂಟ್ ನಿವಾಸಿಗಳ ಸಂಘದ ಕಾರ್ಯದರ್ಶಿ ರಾಮ ಶಾನಭೋಗ, ಆರತಿ ಮಾಲಿಪಾಟೀಲ, ಶರಣು ಮಾಲಿಪಾಟೀಲ, ತಮ್ಮರಾಯ ಪಾಟೀಲ, ಶರಣು ಪಾಟೀಲ, ರಾಘವೇಂದ್ರ ರೆಡ್ಡಿ, ಚೆನ್ನಬಸಬರಾಜ ಮುದ್ದಪ್ಪ, ಜಾನವಿ ಶಾನಭೋಗ, ಸವಿತಾ ಪಾಟೀಲ, ಅರುಣಾ ಗಾರಂಪಳ್ಳಿ ಸೇರಿದಂತೆ ಅಪಾಟೆರ್ಂಟ್ ನಿವಾಸಿಗಳು ಉಪಸ್ಥಿತರಿದ್ದರು.