ದೀಪ ಬೆಳಗಿಸಿ ಕೊರೋನಾ ವಿರುದ್ಧ ಏಕತೆಯ ಮಂತ್ರ ಪಠಣ: ಅಂಬಾರಾಯ ಅಷ್ಠಗಿ ಕೃತಜ್ಞತೆ

0
161

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ದೇಶದ ಬಹುತೇಕ ನಾಗರಿಕರು ಮೇಣಬತ್ತಿ ಹಚ್ಚಿ, ದೀಪ ಬೆಳಗಿಸಿ, ಮೊಬೈಲ್ ಟಾರ್ಚ್ ಆನ್ ಮಾಡುವ ಮೂಲಕ ಐಕ್ಯತೆ, ದೇಶಭಕ್ತಿ ಪ್ರದರ್ಶಿಸಿದ್ದಾರೆಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಏಕತೆಯಿಂದಾಗಿ ಸಂಕಷ್ಟ ಕಾಲದಲ್ಲಿ ಭಾರತೀಯರೆಲ್ಲರೂ ಒಗ್ಗಟ್ಟು ತೋರಿಸುತ್ತಾರೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರಿಂದ ನಾಗರಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆಯಲ್ಲದೇ ಪ್ರಧಾನಿ, ಮುಖ್ಯಮಂತ್ರಿಗಳು, ವೈದ್ಯರು, ಪೊಲೀಸರು ಸೇರಿದಂತೆ ಕಂದಾಯ, ಆರೋಗ್ಯ ಇಲಾಖೆ ಒಳಗೊಂಡಂತೆ ಕೊರೊನಾ ವಿರುದ್ಧದ ಸಂಘರ್ಷದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಬಲ ನೀಡಿ ಹುಮ್ಮಸ್ಸು ತಂದಂತಾಗಿದೆ.

Contact Your\'s Advertisement; 9902492681

ಇಂಥ ಅಭೂತಪೂರ್ವ ಒಗ್ಗಟ್ಟಿನಿಂದಾಗಿ ಭಾರತ ಖಂಡಿತವಾಗಿಯೂ ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಿ ಮತ್ತೆ ಹೊಸ ಶಕ್ತಿಯಾಗಿ ಹೊರಹೊಮ್ಮಲಿದೆ.ಇನ್ನು ಮುಂದೆಯೂ ಕೊರೋನಾ ತೋಲಗಿಸಲು ಜಾಗೃತಿ ವಹಿಸೋಣ , ಇಂದಿನ ಅಭಿಯಾನದಲ್ಲಿ ಕೈಜೋಡಿಸದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಂಬಾರಾಯ ಅಷ್ಟಗಿ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here