ಕಲಬುರಗಿ: ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಆಯುಕ್ತರಾದ ಎನ್ ಸತೀಶ್ ಕುಮಾರ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರದ ನಿರ್ದೇಶನದಂತೆ ಕೊರೋನಾ ತಡೆಗೆ ಮುನ್ನೆಚ್ಷರಿಕೆ ಕ್ರಮಗಳನ್ನು ಕಾಪಾಡುವ ನಿಟ್ಟಿನಲ್ಲಿ ಇಂದು ಜಿಲ್ಲೆಯಲ್ಲಿ ಬೀದಿಗೆ ಇಳಿದು ಕಾರ್ಯಪ್ರವೃತರಾಗಿ ಕಾರ್ಯನಿರ್ವಹಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖ್ಯ ರಸ್ತೆಗಳಲ್ಲಿ ತಪಾಸಣೆ ಕಾರ್ಯ, ನಗರದ ತರಕಾರಿ, ಮೆಡಿಕಲ್, ಕಿರಾಣಿ ಅಂಗಡಿಗಳ ಮುಂದೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಾಕ್ಸ್ ಚಿತ್ರವನ್ನು ರಚಿಸಿ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಅದೇ ರೀತಿ ನಗರದ ಕೆಲವೊಂದು ಅತಿ ಸೂಕ್ಷ್ಮ ರಸ್ತೆಗಳ ಒನ್ ವೇ ಮುಚ್ಚಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಕೈಗೊಳಲಾಗಿದೆ.
ನಗರದ ಟ್ರಾಫಿಕ್ ಮತ್ತು ಕೆ.ಎಸ್.ಆರ್.ಪಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಆಯುಕ್ತರಾದ ಐಪಿಎಸ್ ಎನ್ ಸತೀಶ್ ಕುಮಾರ ಅಭಿನಂದನೆ ವ್ಯಕ್ತ ಪಡಿಸಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.