ಸುರಪುರ: ಟ್ರಾಕ್ಟರ್ ಓಡಿಸುವಾದ ವಿದ್ಯೂತ್ ತಂತಿ ಹರಿದುಬಿದ್ದು ವಿದ್ಯೂತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಕಕ್ಕೇರಾ ಬಳಿಯ ಜಮೀನಿನಲ್ಲಿ ನಡೆದಿದೆ. ಕಕ್ಕೇರಾದ ಪರಶುರಾಮ ತಂದೆ ನಂದಪ್ಪ ಮಲಮತ್ತಿನೋರ ದೊಡ್ಡಿ ಎಂಬ ವ್ಯಕ್ತಿಯು ಜಮೀನಲ್ಲಿ ಟ್ರಾಕ್ಟ್ರ್ ಮೂಲಕ ಹೊಲ ಉಳಿಮೆ ಮಾಡುವಾದ ಪಕ್ಕದ ಜಮೀನಿಗೆ ಹೊಯ್ದಿದ್ದ ವಿದ್ಯೂತ್ ತಂತಿ ಟ್ರಾಕ್ಟರ್ನ ಚತ್ತಿಗೆ ತಗುಲಿ ತುಂಡಾಗಿ ಬಿದ್ದಿದ್ದರಿಂದ ವಿದ್ಯೂತ್ ಸ್ಪರ್ಶಿಸಿ ಪರಶುರಾಮ ಮೃತನಾಗಿದ್ದಾನೆ.
ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು ಸ್ಥಳಕ್ಕೆ ಸುರಪುರ ಠಾಣೆ ಎಎಸ್ಐ ಭಾಗಣ್ಣ ಪೊಲೀಸ್ ಕಾನಸ್ಟೇಬಲ್ಗಳಾದ ಶರಣು ಅರಳಗುಂಡಗಿ ಹಾಗು ಬೀಟ್ ಪೊಲೀಸ್ ಪರಮಣ್ಣ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು,ಶವ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.ಕುಟುಂಬದಲ್ಲಿ ದುಡಿಯುವ ವ್ಯಕ್ತಿಯ ಸಾವಿನಿಂದಾಗಿ ಪರಶುರಾಮನ ಕುಟುಂಬ ದುಖದ ಮಡುವಿನಲ್ಲಿ ಮುಳುಗಿದೆ.