ಸುರಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಾರಾಷ್ಟ್ರ ಗೋವಾ ರಾಜ್ಯಗಳಿಗೆ ಗುಳೆ ಹೋಗಿ ಬಂದವರು ಉಳಿದುಕೊಳ್ಳಲು ತೆರೆಯಲಾದ ಕ್ವಾರಂಟೈನಲ್ಲಿರುವವರಿಗೆ ಎಲ್ಲಾ ರೀತಿಯ ನೆರವನ್ನು ರಾಜುಗೌಡ ಸೇವಾ ಸಮಿತಿಯಿಂದ ನೀಡಲಾಗುತ್ತಿದೆ ಎಂದು ಸಮಿತಿ ಮುಖಂಡ ಪರಶುರಾಮ ನಾಟೇಕಾರ್ ತಿಳಿಸಿದರು.
ತಾಲೂಕಿನ ದೇವರಗೋನಾಲ ಪೇಠ ಅಮ್ಮಾಪುರ ಮಂಗಳೂರು ದೇವತ್ಕಲ್ ಕಕ್ಕೇರಾ ತಿಂಥಣಿ ದೇವಾಪುರ ಆಲ್ದಾಳ ಸೂಗುರು ಹೆಮನೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ತೆರೆಯಲಾದ ಕೋವಿಡ್-೧೯ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕೊರೊನಾ ಶಂಕಿತರಿಗೆ ಸಂಜೆ ಸಮಯದಲ್ಲಿ ಸೇವಿಸಲು ನೀಡಲಾಗುತ್ತಿರುವ ಬೂಂದಿ ಚೋಡಾ ಬಿಸ್ಕೆಟ್ ಮತ್ತಿತರೆ ಫಲಹಾರಗಳ ಕಿಟ್ ವಿತರಿಸಿ ಮಾಹಿತಿ ನೀಡಿ,ಶಾಸಕರಾದ ರಾಜುಗೌಡರು ಕ್ಷೇತ್ರದ ಜನರ ಶ್ರೇಯಸ್ಸಿಗಾಗಿ ಹಗಲಿರಳು ಶ್ರಮಿಸುತ್ತಿದ್ದು,ಇಂದು ಅವರ ಮಾರ್ಗದರ್ಶನದಂತೆ ರಾತ್ರಿ ಊಟ ವಿತರಿಸುವುದು ಸ್ವಲ್ಪ ಸಮಯದ ವ್ಯತ್ಯಾಸವಾದರು ಜನರು ಹಸಿವಿನಿಂದ ನರಳದಿರಲೆಂದು ಫಲಹಾರ ವಿತರಿಸಿ ಸಂಜೆ ವೇಳೆ ಸೇವಿಸಲು ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಿಗಳಪ್ಪ ಕವಡಿಮಟ್ಟಿ,ಪ್ರವೀಣ ವಿಭೂತೆ,ಪವನ ವಿಭೂತೆ,ಚೇತನ್,ರಾಜು ಇತರರಿದ್ದರು.s