ಕಲಬುರಗಿ: ನಗರದ ಕರ್ನಾಟಕ ಸಂಘಟನಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗುರುರಾಜ ಬಂಡಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ನೂತನ ಕರ್ನಾಟಕ ಸಂಘಟನಾ ವೇದಿಕೆಯ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ವಿಕ್ರಮ ಪಾಟೀಲ್ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸಲಹೆಗಾರರಾದ ರವೀಂದ್ರ ಟಿ.ವರ್ಮಾ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಣ್ಣಾರಾವ ಮತ್ತೆಮೋಡ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ನಗರ ಅಧ್ಯಕ್ಷ ವಿಷ್ಣು ಟೆಂಗಳಿ, ಕಲಾವಿದರ ಅಧ್ಯಕ್ಷ ಸಾಗರ ಭಾವಿ ಇದ್ದರು.