ಸುರಪುರ: ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಸ್ಪಂದಿಸಲಿ ಎಂದು ಲಕ್ಷ್ಮೀಪೂರ ಮರಡಿ ಮಲ್ಲಿಕಾರ್ಜುನ ಶ್ರೀ ಮಠದ ಪೂಜ್ಯಶ್ರೀ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಶರಣ ಸೇವಾ ಸಂಸ್ಥೆವತಿಯಿಂದ ಲಕ್ಷ್ಮೀಪುರ ಶ್ರೀ. ಮಠದ ಆವರಣ್ದಲ್ಲಿ ಆಯೋಜಿಸಿದ್ದ ಸಂಸ್ಥೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಂಸ್ಥೆಗಳು ಜನರಿಗೆ ಧÀ್ವನಿಯಾಗಿ ನೊಂದವರಿಗೆ ಧನಿಯಾಗಿ ಸಮಾಜಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರದೀಪ ಕದರಾಪುರ, ಪ್ರಮುಖರಾದ ಸಂಗನಗೌಡ ಧನರೆಡ್ಡಿ, ಮಲ್ಲು ಬಾದ್ಯಾಪುರ, ವೀರಭದ್ರಪ್ಪ ಕುಂಬಾರ, ಅಂಬರೀಶ ಕುಂಬಾರ, ಪ್ರವೀಣ ಜಕಾತಿ ಸೇರಿದಂತೆ ಇತರರಿದ್ದರು. ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಿಕೇರಿ ಅಧ್ಯಕ್ಷತೆ ವಹಿಸಿದ್ದರು, ಮೌನೇಶ ಐನಾಪೂರ ನಿರೂಪಿಸಿ ವಂದಿಸಿದರು.