ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸುರಪುರ ಪತ್ರಕರ್ತರ ಸಂಘ ಸಂತಾಪ

0
100

ಸುರಪುರ: ಖ್ಯಾತ ಪತ್ರಕರ್ತ ಕಲಾವಿದ ಹಾಗು ಶಿಕ್ಷಣ ಪ್ರೇಮಿ ಬರಹಗಾರ ರವಿ ಬೆಳಗೆರೆಯವರ ನಿಧನಕ್ಕೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಸುರಪುರ ತಾಲೂಕು ಘಟಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಸಂತಾಪ ವ್ಯಕ್ತಪಡಿಸಿ,ರವಿ ಬೆಳಗೆರೆ ಕೇವಲ ತಮ್ಮ ಬದುಕಿಗಾಗಿ ಬರವಣಿಗೆಯನ್ನು ಬಳಸದೆ ಇಡೀ ಸಮಾಜದ ಸುಧಾರಣೆಗಾಗಿ ಮತ್ತು ಭ್ರಷ್ಟಾಚಾರದ ನಿರ್ಮೂಲನೆಗಾಗಿ ಮತ್ತು ಅಪರಾಧಗಳ ಕಡಿವಾಣಕ್ಕಾಗಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು.

Contact Your\'s Advertisement; 9902492681

ಅವರ ಸಂಪಾದಕೀಯದ ಹಾಯ್ ಬೆಂಗಳೂರು ಪತ್ರಿಕೆಯು ಅದೆಷ್ಟೋ ಜನ ಅಪರಾಧ ಲೋಕದ ಯುವಕರನ್ನು ಬದಲಾಯಿಸಿದೆ, ಸಾವಿರಾರು ಜನ ಅಪರಾಧಿಗಳ ಮಕ್ಕಳಿಗೆ ತಮ್ಮ ಪ್ರಾರ್ಥನಾ ವಿದ್ಯಾಮಂದಿರದ ಮೂಲಕ ಅಕ್ಷರ ನೀಡಿ ಬಾಳನ್ನು ಬೆಳಗಿಸಿದ ಮಹಾನ್ ವ್ಯಕ್ತಿ.ಅಲ್ಲದೆ ಅವರು ಬರೆದ ಸುಮಾರು ಅರವತ್ತಕ್ಕೂ ಹೆಚ್ಚಿನ ಕೃತಿಗಳು ಪ್ರತಿ ಓದುಗನಲ್ಲಿ ಒಂದು ಸಂಚಲನ ಮೂಡಿಸವಂತವು ಹಾಗು ಲಕ್ಷಾಂತರ ಓದುಗರಿಗೆ ಬರವಣಿಗೆಯ ಹಾದಿಯನ್ನು ತಿಳಿಸಿರುವಂತವು,ಅಂತಹ ಅಕ್ಷರ ಮಾಂತ್ರಿಕ ಇನ್ನಿಲ್ಲವಾಗಿರುವುದು ಈ ನಾಡಿಗೆ ಬದುದೊಡ್ಡ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ರವಿ ಬೆಳಗೆರೆಯವರ ನಿಧನಕ್ಕೆ ಕೆಜೆಯು ತಾಲೂಕು ಉಪಾಧ್ಯಕ್ಷ ಮಲ್ಲು ಗುಳಗಿ ರವಿರಾಜ ಕಂದಳ್ಳಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಕಾರ್ಯದರ್ಶಿ ಮಲ್ಲಿಕಾರ್ಜುನ ತಳ್ಳಳ್ಳಿ ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಧೀರೆಂದ್ರ ಕುಲಕರ್ಣಿ ಶ್ರೀಕರ ಜೋಷಿ ಹೊನ್ನಪ್ಪ ತೇಲ್ಕರ್ ಮುರಳಿಧರ ಅಂಬುರೆ ಮಾಳಪ್ಪ ಕಿರದಹಳ್ಳಿ ಮನಮೋಹನ ದೇವಾಪುರ ನಾಗರಾಜ ದೇಸಾಯಿ ರಾಘವೇಂದ್ರ ಮಾಸ್ತರ್ ಪುರುಷೋತ್ತಮ ದೇವತ್ಕಲ್ ಮದನ್ ಕಟ್ಟಿಮನಿ ಕಲೀಂ ಫರೀದಿ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here