ಕಲಬುರಗಿ: ಸಿ.ಐ.ಬಿ. ಕಾಲೋನಿ ಹಾಗೂ ಘಾಟಗಡ ಲೇಔಟ್ ಮಧ್ಯದಲ್ಲಿನ ಜಿಡಿಎ ಬಡಾವಣೆಯಲ್ಲಿ ನವೋದಯ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘದ ೧೩ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಹಾಗೂ ನೂತನ ಕಛೇರಿ ಕಟ್ಟಡಕ್ಕೆ ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಉದ್ಘಾಟಿಸಿದರು.
ಪೂಜ್ಯ ಭಂತೆ ಧಮ್ಮನಾಗ, ಪೂಜ್ಯ ಭಂತೆ ಸಂಘಾನಂದ, ಸಂಘದ ಅಧ್ಯಕ್ಷ ಡಾ. ಸುರೇಶ ಶರ್ಮಾ, ಉಪಾಧ್ಯಕ್ಷರಾಗಿ ಶಿವಶರಣಪ್ಪ ಅನವಾರ, ನಿರ್ದೇಶಕರುಗಳಾದ ಸುರ್ಯಕಾಂತ ಶೃಗೇರಿ, ಬಿ.ಬಿ. ರಾಂಪುರೆ, ಈಶ್ವರ ಇಂಗನ್, ಚಿದಾನಂದ ಕಡಗಂಚಿ, ದಾನಪ್ಪ ಮದ್ರಿ, ಚಂದ್ರಾಮ ಹುಬಳಿ, ಶಶಿಕಾಂತ ಹೋಳ್ಕರ್, ಕೆ.ಸಿ.ಭಾವಿಮನಿ, ಎಸ್.ಎಮ್.ಪಟ್ಟಣಕರ್, ಚಂದ್ರಕಾಂತ ಅಷ್ಟಗಿ, ಯಶ್ವಂತ ಸಿಂಧೆ, ನಾಗೆಂದ್ರಪ್ಪ ಕಟ್ಟಿಮನಿ, ಪರಮೇಶ್ವರ ಸಂಗಾವಿ, ಬಕ್ಕಪ್ಪ ಚಂದಾಪೂರ, ಸುಶಿಲಾಬಾಯಿ ಕಟ್ಟಿ, ಕಸ್ತೂರಿಬಾಯಿ ಬುದ್ಧ, ಬಿ.ಆರ್.ಬುದ್ಧ, ಶಾಂತಪ್ಪ ಸೂರನ, ಕುಪೇಂದ್ರ ಕಡಗಂಚಿ, ಅಭಿಷೇಖ ಲಿಂಬಾರೆ ಇದ್ದರು.