ಶಹಾಬಾದ: ನಗರದಲ್ಲಿ ಶುಕ್ರವಾರ ಸೆಂಟ್ರಲ್ ಮೆಥೋಡಿಸ್ಟ ಚರ್ಚನಲ್ಲಿ ಕ್ರೈಸ್ತ ಧರ್ಮಿಯರು ಬೆಳಿಗ್ಗೆ ಚರ್ಚಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಕ್ರೈಸ್ತ ಧರ್ಮಿಯರು ನಿಮಿತ್ತ ಚರ್ಚಗೆ ಸುಣ್ಣ ಬಣ್ಣ ಬಳಿದು, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು, ನಕ್ಷತ್ರಗಳ ಮಿಂಚು, ಬಲೂನ್ಗಳ ಚಿತ್ತಾರ, ವಿಭಿನ್ನ ವಿನ್ಯಾಸದ ಗೋದಲಿಗಳು, ಸಾಂತಾ ಕ್ಲಾಸ್ನ ಪ್ರತಿಬಿಂಬ ಸೇರಿದಂತೆ ಶುಭ ಸಂಕೇತದ ಗಂಟೆ ಹಬ್ಬದ ಸಂಭ್ರಮ ಕಣ್ಣಿಗೆ ಕಟ್ಟಿತುೆಲ್ಲೆಡೆ ಸಂಭ್ರಮ ಮನೆಮಾಡಿತು.
ಏಸು ಜನಿಸುವ ಪೂರ್ವದಲ್ಲಿ ಆಕಾಶದಲ್ಲಿ ಶುಭ ಸಂಕೇತವಾಗಿ ನಕ್ಷತ್ರವೊಂದು ಗೋಚರವಾಗಿತ್ತು ಎಂಬ ಕಾರಣದಿಂದಾಗಿ ಕ್ರೈಸ್ತ ಧರ್ಮಿಯರು ತಮ್ಮ ಮನೆಗಳ ಮುಂದೆ ನಕ್ಷತ್ರಗಳ ದೀಪ ಬೆಳಗಿಸುವುದು ಕಂಡು ಬಂದರೆ, ಚರ್ಚಗಳಲ್ಲಿ ಹಚ್ಚ ಹಸುರಿನ ಕ್ರಿಸ್ಮಸ್ ವೃಕ್ಷಗಳು ಸಾಮಾನ್ಯವಾಗಿ ಕಂಡು ಬಂದವು.
ನಗರದ ಸೆಂಟ್ರಲ್ ಮೆಥೋಡಿಸ್ಟ ಚರ್ಚನಲ್ಲಿ ಪಾಸ್ಟರ್ ರೆವರೆಂಡ್ ಎಚ್.ಎಸ್.ಸ್ಯಾಮುವೆಲ್ ಬೈಬಲ್ನ ಸಂದೇಶವನ್ನು ಹೇಳಿ, ಪ್ರಾರ್ಥನೆ ಸಲ್ಲಿಸಿದರು. ನಂತರ ಹಬ್ಬಕ್ಕೆ ಸಿದ್ಧಮಾಡಿಕೊಂಡಿದ್ದ ತರತರಹದ ಕೇಕ್ಗಳನ್ನು, ಸಿಹಿ ತಿಂಡಿಗಳನ್ನು ಬಂಧು ಬಳಗದವರೊಂದಿಗೆ ಸವಿದರು.
ಈ ಸಂದರ್ಭದಲ್ಲಿಶಾಂತರಾಜ ಬಾಗೋಡಿ, ವಿದ್ಯಾಸಾಗರ,ಜಯವಂತ, ಜಾನ್ ಸೋಮನ, ಶಂಕರ ಕಾಂಬಳೆ, ಶಿಕ್ಷಕ ಭಾಸ್ಕರ್,ವಿದ್ಯಾ ಭಗತ್, ಇಮ್ಯಾನುವೆಲ್ ಜಾನ್ಪಾಲ ಸೇರಿದಂತೆ ಅನೇಕರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.