ಆಳಂದ: ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕುಮಸಿ ಸಮ್ಮುಖದಲ್ಲಿ ಶನಿವಾರ ನೇಮಕ ಮಾಡಲಾಯಿತು.
ಪಟ್ಟಣದ ಗುರು ಭವನದಲ್ಲಿ ಜರುಗಿದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಶಿವಾನಂದ ಅಂಬರೆ, ಅಧ್ಯಕ್ಷರಾಗಿ ಶಿವರಾಜ ಕಲಶೆಟ್ಟಿ, ಉಪಾಧ್ಯಕ್ಷರಾಗಿ ರೇಖಾ ಗಂಜಿ, ಕಾರ್ಯದರ್ಶಿಯಾಗಿ, ರಾಜಶೇಖರ ಪಾಟೀಲ, ಖಜಾಂಚಿಯಾಗಿ ಅಪ್ಪಾರಾವ ಪಾಟೀಲ, ಸಂಘಟನಾ ಕಾರ್ಯದರ್ಶಿಗಳಾಗಿ ನಿರಂಜಯ್ಯ, ಮಲ್ಲಿನಾಥ ವಚ್ಚೆ, ಸಹ ಕಾರ್ಯದರ್ಶಿಗಳಾಗಿ, ಮಲ್ಲಿಕಾರ್ಜುನ ನಿಂಗದಳ್ಳಿ, ವೀರಸಂಗಯ್ಯ, ತಾಂತ್ರಿಕ ಸಲಹೆಗಾರರಾಗಿ ಮಲ್ಲಿಕಾರ್ಜುನ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ರತ್ನಕುಮಾರ ಮಾಂಜ್ರೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕುಮಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.