ಕಲಬುರಗಿ: ಕೃಷಿ ಕಾಯಿದೆ ವಾಪಸ್ ಕುರಿತಂತೆ ಸರಕಾರ ಪ್ರತಿಷ್ಠೆಯನ್ನಾಗಿ ಪರಿಗಣಿಸದಂತೆ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ, ಸದರಿ ವಿಷಯವನ್ನು ಸ್ಥಾಯಿ ಸಮಿತಿಗೆ ರವಾನಿಸಬೇಕೆಂದಿದ್ದಾರೆ.
ಅಧಿಕಾರದಲ್ಲಿ ಇರುವವರು ಪ್ರಜಾತಂತ್ರ ವ್ಯವಸ್ಥೆಗೆ, ಸಂವಿಧಾನಕ್ಕೆ ಹಾಗೂ ಸಂಸತ್ತಿಗೆ ಗೌರವ ಕೊಡಬೇಕು ಎಂದು ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
The government should not make this a prestige issue. They should repeal the laws and refer #FarmLaws to the standing committee. It is time that those in power respect democracy, Constitution and the Parliament on Republic Day. https://t.co/b0vJwLr71E
— Mallikarjun Kharge (@kharge) January 26, 2021