ಭಾಲ್ಕಿ: ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ದಿ: ೧೧-೦೩-೨೦೨೧ ಗುರುವಾರ ಸಮಯ: ಮಧ್ಯಾಹ್ನ ೨-೦೦ ಗಂಟೆಗೆ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪ, ಚನ್ನಬಸವಾಶ್ರಮ ಭಾಲ್ಕಿಯಲ್ಲಿ ಸರ್ವ ಶಿವಶರಣರ ಸ್ಮರಣೋತ್ಸವ ಹಾಗೂ ಮಹಾಶಿವರಾತ್ರಿ ನಿಮಿತ್ಯ ಸಾಮೂಹಿಕ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿದೆ.
ಲಿಂಗಾಯತ ಧರ್ಮೀಯರಿಗೆ ವಿಶ್ವಗುರು ಬಸವಣ್ಣನವರೇ ಧರ್ಮಗುರು, ಬಸವಾದಿ ಶರಣರ ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೇ ಏಕೈಕ ಆರಾಧ್ಯ ದೈವ ಆಗಿರುತ್ತವೆ. ಅಷ್ಟಾವರಣ, ಷಟ್ಸ್ಥಲ ಮತ್ತು ಪಂಚಾಚಾರಗಳೆ ಈ ಧರ್ಮೀಯರ ಪ್ರಾಣವೆನಿಸಿರುತ್ತವೆ. ಕಾಯಕ ಮತ್ತು ದಾಸೋಹ ಬದುಕನ್ನು ಮುನ್ನಡೆಸುತ್ತವೆ.
ಶಿಕ್ಷಕರಿಗೆ ಕಚೇರಿಗೆ ಅಲಿಯುವುದನ್ನು ತಪ್ಪಿಸಲು ಶಿಕ್ಷಕ ಮಿತ್ರ ಮೋಬೈಲ ಆ್ಯಪ್ ಬಿಡುಗಡೆ
ಸತ್ಚಿತ್ ಆನಂದ ನಿತ್ಯ ಪರಿಪೂರ್ಣ ಅಖಂಡ ಪರವಸ್ತುವಿನ ಸಂಕೇತ ಇಷ್ಟಲಿಂಗವಾಗಿದೆ. ಇಷ್ಟಲಿಂಗದ ಜನಕ ವಿಶ್ವಗುರು ಬಸವಣ್ಣನವರಾಗಿದ್ದಾರೆ. ಇಷ್ಟಲಿಂಗದ ಪೂಜೆಯಿಂದ ಅಂಗ ಗುಣಗಳು ಲಿಂಗ ಗುಣಗಳಾಗಿ ವ್ಯಕ್ತಿಯ ಅಂತರಂಗದ ಸೌಂದರ್ಯ ವೃದ್ಧಿಸುತ್ತದೆ. ಸಾಮೂಹಿಕ ಇಷ್ಟಲಿಂಗದ ಪೂಜೆಯು ಸಮಷ್ಟಿಯ ಪೂಜೆಯಾಗಿದೆ.
ಆದ್ದರಿಂದ ಸಮಸ್ತ ಸದ್ಭಕ್ತರು ಈ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಅಮರಗಣಂಗಳ ಸಾಂಕೇತಿಕವಾಗಿ ಶರಣ-ಶರಣೆಯರು ಮಕ್ಕಳು ಎಲ್ಲರೂ ಸಾಮೂಹಿಕವಾಗಿ ಪೂಜೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.