ಕಲಬುರಗಿ: ಸುರ್ಯ ನಗರದಲ್ಲಿರುವ ಕುಡು ಒಕ್ಕಲಿಗ ಸಮಾಜದ ವಸತಿನಿಲಯದಲ್ಲಿ ಸುಗಲಾದೇವಿ ಮಹಿಳಾ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚಾರಣೆ ಆಚರಿಸಲಾಯಿತು.
ದಿನಾಚರಣೆ ಅಂಗವಾಗಿ ಸಮಾಜದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ನಂದಾದೇವಿ ಮಂಗೊಂಡ ೨೦೦೯ ರಲ್ಲಿ ಧಾರವಾಡ ಕ್ರಷಿ ವಿಶ್ವವಿದ್ಯಾಲಯದ ಶ್ರೆಸ್ಟ ಮಹಿಳಾ ಪ್ರಶಸ್ತಿ, ಗುಂಜ್ ಬಬಲಾದ್ನ ಗ್ರಾಮ ಪಂಚಾಯತ್ ಅಧ್ಯಕ್ಷೆ, ಸಮಾಜ ಸೆವಕಿ ರಾಣಿಚನ್ನಮ್ಮಗೆ ಬಸವರತ್ನ ಪ್ರಶಸ್ತಿ, ಆಳಂದ ತಾಲುಕಿನ ಪಡಸಾವಳಗಿ ಗ್ರಾಮದ ವಿಮಲಾ ಹೊಸಮನಿ ಅವರಿಗೆ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ.
ಮಹಿಳಾ ಸುಗಲಾದೆವಿ ಸಂಘದ ಅಧ್ಯಕ್ಷರಾದ ಚಂದ್ರಲಾಂಬಾ ದೇವುರ್, ಶಶಿಕಲಾ ಶಿರಗೂಂಡ, ಶಾಂತಾ ಪಾಟೀಲ್, ಜಯಶ್ರಿ ಪಾಟೀಲ್, ಶೈಲಜಾ ಖಾಜಾಪುರ, ಜಗದೇವಿ ಪಾಟೀಲ, ಜಿಲ್ಲಾ ಅಧ್ಯಕ್ಷ ಶರಣಪ್ಪಾ ವಾಡಿ, ಉಪಾಧ್ಯಕ್ಷ ಶಾಮರಾಯ ವಡಗೆರಾ, ಯುವಾ ಜಿಲ್ಲಾಧ್ಯಕ್ಷ ಶಶಿಕಾಂತ ಖುಷಿಗೌಡ, ಹರಿಶ್ ಕುಮಾರ, ಹುಲಿಕಂಟ ಸೆರಿದಂತೆ ಸಮಾಜದ ಸದಸ್ಯರು ಹಾಗೂ ಮಹಿಳಾ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.